ಕಡಪ: ಈ ಆಧುನಿಕ ಯುಗದಲ್ಲೂ ಕುಟುಂಬದ ತಲೆಮಾರುಗಳ ಪರಂಪರೆಯನ್ನು ಉಳಿಸಿಕೊಂಡು, ಪೋಷಿಸಿಕೊಂಡು ಬರುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅವರಲ್ಲೊಬ್ಬರು ಅಂಧ್ರಪ್ರದೇಶದ ಕೊಂಡಪಲ್ಲಿ ಚಿದಂಬರ ನಟರಾಜ.
ಇದನ್ನೂ ಓದಿ: ಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ ಉತ್ಪಾದನೆ: ದುಬಾರಿ ಬೆಲೆ
ನಟರಾಜ ಅವರ ಜೀವನ ನಿರ್ವಹಣೆ ಸಂಗೀತದ ಮೇಲೆ ಅವಲಂಬಿತವಾಗಿದೆ. ಕಡಪ ಜಿಲ್ಲೆಯ ಮಿದುಕೂರ್ ಊರಿನವರಾದ ಅವರು ಓರ್ವ ಪ್ರತಿಭಾನ್ವಿತ ಮೃದಂಗ ಕಲಾವಿದ. ಹಲವು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ನಟರಾಜ ಅವರು ಇದೀಗ ನೂತನ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆ
ಅವರು ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಡಲಾಗಿದ್ದು ಫಲಿತಾಂಶಕ್ಕೆ ಕಾದಿದ್ದಾರೆ. ಅವರು ಅಂದುಕೊಂಡಂತೆಯೇ ನಡೆದರೆ ಏಕಕಾಲಕ್ಕೆ ಅತಿ ಹೆಚ್ಚು ತಬಲಾ ನುಡಿಸಿದ ದಾಖಲೆಗೆ ನಟರಾಜ ಅವರು ಪಾತ್ರರಾಗಲಿದ್ದಾರೆ.
ಇದನ್ನೂ ಓದಿ: ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್
ನಟರಾಜ ಅವರ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ತಾತ ಕೊಂಡಪಲ್ಲಿ ಭಿಕ್ಷಾಪತಿ ಹಾರ್ಮೋನಿಯಂ ವಾದಕರಾಗಿದ್ದರು. ನತರಾಜ ಅವರ ತಂದೆ ವೀರಭದ್ರಯ್ಯ ಸಂಗೀತದ ಜೊತೆಗೆ ಹರಿಕಥೆ, ಬುರ್ರಕಥೆಯಲ್ಲೂ ಪ್ರವೀಣರಾಗಿದ್ದರು. ಎಲ್ಲಕ್ಕಿಂತ ಅಚ್ಚರಿಯೆಂದರೆ ಅವರು ಯಕ್ಷಗಾನವನ್ನೂ ಕಲಿತಿದ್ದರು ಎನ್ನುವುದು.
ಇದನ್ನೂ ಓದಿ: ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ
ಸಂಗೀತ ಪರಂಪರೆಯನ್ನು ಹೊಂದಿದ ಕುಟುಂಬದಿಂದ ಬಂದ ನಟರಾಜ ಅವರೂ ತಮ್ಮ ತಂದೆಯಂತೆ ಸಾಧನೆ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ.
ಇದನ್ನೂ ಓದಿ: ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ