social_icon

ಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರ 

ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಅವರು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಟ್ಟಿದ್ದು ಫಲಿತಾಂಶಕ್ಕೆ ಕಾದಿದ್ದಾರೆ.

Published: 29th November 2021 01:04 PM  |   Last Updated: 29th November 2021 01:08 PM   |  A+A-


ಕೊಂಡಪಲ್ಲಿ ಚಿದಂಬರ ನಟರಾಜ

Posted By : Harshavardhan M
Source : The New Indian Express

ಕಡಪ: ಈ ಆಧುನಿಕ ಯುಗದಲ್ಲೂ ಕುಟುಂಬದ ತಲೆಮಾರುಗಳ ಪರಂಪರೆಯನ್ನು ಉಳಿಸಿಕೊಂಡು, ಪೋಷಿಸಿಕೊಂಡು ಬರುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅವರಲ್ಲೊಬ್ಬರು ಅಂಧ್ರಪ್ರದೇಶದ ಕೊಂಡಪಲ್ಲಿ ಚಿದಂಬರ ನಟರಾಜ.

ಇದನ್ನೂ ಓದಿ: ಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ ಉತ್ಪಾದನೆ: ದುಬಾರಿ ಬೆಲೆ

ನಟರಾಜ ಅವರ ಜೀವನ ನಿರ್ವಹಣೆ ಸಂಗೀತದ ಮೇಲೆ ಅವಲಂಬಿತವಾಗಿದೆ. ಕಡಪ ಜಿಲ್ಲೆಯ ಮಿದುಕೂರ್ ಊರಿನವರಾದ ಅವರು ಓರ್ವ ಪ್ರತಿಭಾನ್ವಿತ ಮೃದಂಗ ಕಲಾವಿದ. ಹಲವು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ನಟರಾಜ ಅವರು ಇದೀಗ ನೂತನ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆ 

ಅವರು ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಡಲಾಗಿದ್ದು ಫಲಿತಾಂಶಕ್ಕೆ ಕಾದಿದ್ದಾರೆ. ಅವರು ಅಂದುಕೊಂಡಂತೆಯೇ ನಡೆದರೆ ಏಕಕಾಲಕ್ಕೆ ಅತಿ ಹೆಚ್ಚು ತಬಲಾ ನುಡಿಸಿದ ದಾಖಲೆಗೆ ನಟರಾಜ ಅವರು ಪಾತ್ರರಾಗಲಿದ್ದಾರೆ. 

ಇದನ್ನೂ ಓದಿ: ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್

ನಟರಾಜ ಅವರ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ತಾತ ಕೊಂಡಪಲ್ಲಿ ಭಿಕ್ಷಾಪತಿ ಹಾರ್ಮೋನಿಯಂ ವಾದಕರಾಗಿದ್ದರು. ನತರಾಜ ಅವರ ತಂದೆ ವೀರಭದ್ರಯ್ಯ ಸಂಗೀತದ ಜೊತೆಗೆ ಹರಿಕಥೆ, ಬುರ್ರಕಥೆಯಲ್ಲೂ ಪ್ರವೀಣರಾಗಿದ್ದರು. ಎಲ್ಲಕ್ಕಿಂತ ಅಚ್ಚರಿಯೆಂದರೆ ಅವರು ಯಕ್ಷಗಾನವನ್ನೂ ಕಲಿತಿದ್ದರು ಎನ್ನುವುದು. 

ಇದನ್ನೂ ಓದಿ: ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ

ಸಂಗೀತ ಪರಂಪರೆಯನ್ನು ಹೊಂದಿದ ಕುಟುಂಬದಿಂದ ಬಂದ ನಟರಾಜ ಅವರೂ ತಮ್ಮ ತಂದೆಯಂತೆ ಸಾಧನೆ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ.

ಇದನ್ನೂ ಓದಿ: ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ


Stay up to date on all the latest ವಿಶೇಷ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp