ಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ

ಪಾಕಿಸ್ತಾನ ಜಾಗತಿಕ ಮಟ್ಟದ ಭಯೋತ್ಪಾದನೆಯ ಕೇಂದ್ರ. ಗಡಿಯಾಚೆಗೆ ಭಯೋತ್ಪದನಾ ಚಟುವಟಿಕೆಗಳನ್ನು ಎಂದಿನಿಂದಲೂ ನಡೆಸಿಕೊಂಡು ಬಂದಿದೆ ಎಂದು ಅಮರ್ ನಾಥ್ ಆರೋಪ ಮಾಡಿದ್ದಾರೆ. 
ಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ
Updated on

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾಮಂಡಳಿ ಸಭೆಯಲ್ಲಿ 'ಒಂದೆಡೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಸಾಮಾ ಬಿನ್ ಲ್ಯಾಡೆ ನಂಥವರನ್ನು ಹುತಾತ್ಮ ಎಂದು ವೈಭವೀಕರಿಸುತ್ತಾರೆ. ಆದರೆ ಇಲ್ಲಿ ಬಂದು ಶಾಂತಿ ಮಂತ್ರ ಜಪಿಸುತ್ತಾರೆ.' ಎಂದು ಭಾರತದ ಪ್ರತಿನಿಧಿ ಎ ಅಮರ್ ನಾಥ್ ಕಿಡಿ ಕಾರಿದ್ದಾರೆ. 76ನೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಪಾಕಿಸ್ತಾನ ಜಾಗತಿಕ ಮಟ್ಟದ ಭಯೋತ್ಪಾದನೆಯ ಕೇಂದ್ರ. ಗಡಿಯಾಚೆಗೆ ಭಯೋತ್ಪದನಾ ಚಟುವಟಿಕೆಗಳನ್ನು ಎಂದಿನಿಂದಲೂ ನಡೆಸಿಕೊಂಡು ಬಂದಿದೆ ಎಂದು ಅಮರ್ ನಾಥ್ ಆರೋಪ ಮಾಡಿದ್ದಾರೆ. 

ಪಾಕಿಸ್ತಾನ ಈ ಹಿಂದೆ ಜಮ್ಮು ಕಾಶ್ಮೀರ ಮತ್ತು ಲಡಾಖ್ ವಿಚಾರಗಳಲ್ಲಿ ಮೂಗು ತೂರಿಸಿತ್ತು. ಇವೆಲ್ಲಾ ಭಾರತ ಆಂತರಿಕ ವಿಚಾರಗಳಾಗಿವೆ ಎಂದು ಅವರು ಇದೇ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com