ಅಜಯ್ ದೇವಗನ್ 
ಬಾಲಿವುಡ್

ಶಾರುಖ್ ಖಾನ್ ಅಭಿನಯದ 'ಪಠಾಣ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವೆ: ನಟ ಅಜಯ್ ದೇವಗನ್

ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ಭೋಲಾ'ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್-ಎಂಟರ್‌ಟೈನರ್ 'ಪಠಾನ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಇದು 'ನಮ್ಮ ಇಂಡಸ್ಟ್ರಿಯನ್ನು (ಬಾಲಿವುಡ್) ಮತ್ತೆ ಉತ್ತಮ ಟ್ರ್ಯಾಕ್‌ಗೆ ಕೊಂಡೊಯ್ಯುತ್ತದೆ' ಎಂದು ಆಶಿಸಿದ್ದಾರೆ.

ಮುಂಬೈ: ನಟ-ನಿರ್ದೇಶಕ ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ಭೋಲಾ'ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್-ಎಂಟರ್‌ಟೈನರ್ 'ಪಠಾನ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಇದು 'ನಮ್ಮ ಇಂಡಸ್ಟ್ರಿಯನ್ನು (ಬಾಲಿವುಡ್) ಮತ್ತೆ ಉತ್ತಮ ಟ್ರ್ಯಾಕ್‌ಗೆ ಕೊಂಡೊಯ್ಯುತ್ತದೆ' ಎಂದು ಆಶಿಸಿದ್ದಾರೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ದೃಶ್ಯಂ 2' ಬಿಡುಗಡೆಯಾಗಿ ಸೂಪರ್‌ಹಿಟ್ ಆದಾಗ, ಇತರ ಚಿತ್ರಗಳು ಉತ್ತಮವಾಗಿ ಬರಬೇಕೆಂದು ನಾನು ಬಯಸಿದ್ದೆ. ಸಾಂಕ್ರಾಮಿಕ ಪ್ರಚೋದಿತ ವಿರಾಮದಿಂದ ಪಾರು ಮಾಡಲು ತ್ವರಿತ ಅನುಕ್ರಮವಾಗಿ ನಮ್ಮ ಉದ್ಯಮವನ್ನು ಉಲಿಸಲು ಹಿಂದಿ ಚಿತ್ರರಂಗದಲ್ಲಿ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. 

ನಾನು 'ಪಠಾಣ್'ಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇನೆ. ಆ ಚಿತ್ರದ ಮುಂಗಡ ಬುಕ್ಕಿಂಗ್ ಟ್ರೆಂಡ್‌ಗಳು ಯಾವುದಕ್ಕೂ ಸಾಟಿಯಿಲ್ಲದವುಗಳಾಗಿವೆ. ಈ ಚಿತ್ರ ಯಶಸ್ಸು ಕಾಣುತ್ತದೆ ಮತ್ತು ನಮ್ಮ ಚಿತ್ರರಂಗವನ್ನು ಉತ್ತಮ ಟ್ರ್ಯಾಕ್‌ನಲ್ಲಿ ಇರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

'ಪಠಾಣ್' ಸಿನಿಮಾವು ಭಾರತೀಯ ಗೂಢಚಾರನೊಬ್ಬನ ಕಥೆಯನ್ನು ಒಳಗೊಂಡಿದ್ದು, ಆತ ಯಾವುದೇ ವ್ಯವಸ್ಥೆ ಅಥವಾ ವಲಯಕ್ಕೆ ಪ್ರವೇಶಿಸಬಲ್ಲ ತನ್ನ ರಹಸ್ಯ ಮತ್ತು ಊಸರವಳ್ಳಿಯಂತಹ ಸಾಮರ್ಥ್ಯಗಳನ್ನು ಅವನು ವಾಸಿಸುವ ಪ್ರಪಂಚದೊಂದಿಗೆ ವಿಲೀನಗೊಳಿಸಬಲ್ಲಂತವನಾಗಿರುತ್ತಾನೆ. 

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 'ಪಠಾಣ್' ಸಿನಿಮಾ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ.

'ಭೋಲಾ' ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ಮಗಳನ್ನು ಮೊದಲ ಬಾರಿಗೆ ಭೇಟಿಯಾಗಲು ನಿರ್ಧರಿಸುತ್ತಾನೆ. ತೆರಳುವಾಗ ಗಂಭೀರ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಮಾಜಿ ಅಪರಾಧಿಯ ಕಥೆಯನ್ನು ಹೇಳುತ್ತದೆ. ಇದರಲ್ಲಿ ಟಬು ಕೂಡ ನಟಿಸಿದ್ದಾರೆ.

ಅಜಯ್ ದೇವಗನ್ ಫಿಲ್ಮ್ಸ್, ಟಿ-ಸೀರೀಸ್ ಫಿಲ್ಮ್ಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT