ಅಜಯ್ ದೇವಗನ್ 
ಬಾಲಿವುಡ್

ಶಾರುಖ್ ಖಾನ್ ಅಭಿನಯದ 'ಪಠಾಣ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವೆ: ನಟ ಅಜಯ್ ದೇವಗನ್

ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ಭೋಲಾ'ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್-ಎಂಟರ್‌ಟೈನರ್ 'ಪಠಾನ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಇದು 'ನಮ್ಮ ಇಂಡಸ್ಟ್ರಿಯನ್ನು (ಬಾಲಿವುಡ್) ಮತ್ತೆ ಉತ್ತಮ ಟ್ರ್ಯಾಕ್‌ಗೆ ಕೊಂಡೊಯ್ಯುತ್ತದೆ' ಎಂದು ಆಶಿಸಿದ್ದಾರೆ.

ಮುಂಬೈ: ನಟ-ನಿರ್ದೇಶಕ ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ಭೋಲಾ'ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್-ಎಂಟರ್‌ಟೈನರ್ 'ಪಠಾನ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಇದು 'ನಮ್ಮ ಇಂಡಸ್ಟ್ರಿಯನ್ನು (ಬಾಲಿವುಡ್) ಮತ್ತೆ ಉತ್ತಮ ಟ್ರ್ಯಾಕ್‌ಗೆ ಕೊಂಡೊಯ್ಯುತ್ತದೆ' ಎಂದು ಆಶಿಸಿದ್ದಾರೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ದೃಶ್ಯಂ 2' ಬಿಡುಗಡೆಯಾಗಿ ಸೂಪರ್‌ಹಿಟ್ ಆದಾಗ, ಇತರ ಚಿತ್ರಗಳು ಉತ್ತಮವಾಗಿ ಬರಬೇಕೆಂದು ನಾನು ಬಯಸಿದ್ದೆ. ಸಾಂಕ್ರಾಮಿಕ ಪ್ರಚೋದಿತ ವಿರಾಮದಿಂದ ಪಾರು ಮಾಡಲು ತ್ವರಿತ ಅನುಕ್ರಮವಾಗಿ ನಮ್ಮ ಉದ್ಯಮವನ್ನು ಉಲಿಸಲು ಹಿಂದಿ ಚಿತ್ರರಂಗದಲ್ಲಿ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. 

ನಾನು 'ಪಠಾಣ್'ಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇನೆ. ಆ ಚಿತ್ರದ ಮುಂಗಡ ಬುಕ್ಕಿಂಗ್ ಟ್ರೆಂಡ್‌ಗಳು ಯಾವುದಕ್ಕೂ ಸಾಟಿಯಿಲ್ಲದವುಗಳಾಗಿವೆ. ಈ ಚಿತ್ರ ಯಶಸ್ಸು ಕಾಣುತ್ತದೆ ಮತ್ತು ನಮ್ಮ ಚಿತ್ರರಂಗವನ್ನು ಉತ್ತಮ ಟ್ರ್ಯಾಕ್‌ನಲ್ಲಿ ಇರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

'ಪಠಾಣ್' ಸಿನಿಮಾವು ಭಾರತೀಯ ಗೂಢಚಾರನೊಬ್ಬನ ಕಥೆಯನ್ನು ಒಳಗೊಂಡಿದ್ದು, ಆತ ಯಾವುದೇ ವ್ಯವಸ್ಥೆ ಅಥವಾ ವಲಯಕ್ಕೆ ಪ್ರವೇಶಿಸಬಲ್ಲ ತನ್ನ ರಹಸ್ಯ ಮತ್ತು ಊಸರವಳ್ಳಿಯಂತಹ ಸಾಮರ್ಥ್ಯಗಳನ್ನು ಅವನು ವಾಸಿಸುವ ಪ್ರಪಂಚದೊಂದಿಗೆ ವಿಲೀನಗೊಳಿಸಬಲ್ಲಂತವನಾಗಿರುತ್ತಾನೆ. 

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 'ಪಠಾಣ್' ಸಿನಿಮಾ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ.

'ಭೋಲಾ' ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ಮಗಳನ್ನು ಮೊದಲ ಬಾರಿಗೆ ಭೇಟಿಯಾಗಲು ನಿರ್ಧರಿಸುತ್ತಾನೆ. ತೆರಳುವಾಗ ಗಂಭೀರ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಮಾಜಿ ಅಪರಾಧಿಯ ಕಥೆಯನ್ನು ಹೇಳುತ್ತದೆ. ಇದರಲ್ಲಿ ಟಬು ಕೂಡ ನಟಿಸಿದ್ದಾರೆ.

ಅಜಯ್ ದೇವಗನ್ ಫಿಲ್ಮ್ಸ್, ಟಿ-ಸೀರೀಸ್ ಫಿಲ್ಮ್ಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT