ಸಿನಿಮಾ ಸುದ್ದಿ

ಕಲಾವಿದನಾಗಿ ನಾನು ನೀರಿನಂತೆ ಇರಬೇಕು, ಪಾತ್ರ ಯಾವುದಾದರೂ ಅದಕ್ಕೆ ಒಗ್ಗಿಕೊಳ್ಳಬೇಕು: ಟಾಮ್ ಅಂಡ್ ಜೆರ್ರಿ ನಾಯಕ ನಿಶ್ಚಿತ್ ಕೊರೊಡಿ

Harshavardhan M

ರಂಗಭೂಮಿ ಹಿನ್ನೆಲೆಯಿಂದ ಬಂದ ನಟ ನಿಶ್ಚಿತ್ ಕೊರೊಡಿ ಗಂಟುಮೂಟೆ ಸಿನಿಮಾ ಮೂಲಕ ಛಾಪು ಮೂಡಿಸಿದವರು. ಅವರು ಹೊಸದಾಗಿ ನಟಿಸಿದ ಟಾಮ್ ಅಂಡ್ ಜೆರ್ರಿ ಸಿನಿಮಾ ಇದೇ ನವೆಂಬರ್ 12ರಂದು ತೆರೆಕಾಣುತ್ತಿದೆ. ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಈ ಸಿನಿಮಾಗಾಗಿ ತಾವು ಹಲವು ರೂಪಾಂತರಗಳಿಗೆ ಒಡ್ಡಿಕೊಂಡಿದ್ದರು.

ಮೊದಲ ಪುಟ ಸ್ಕ್ರಿಪ್ಟ್ ಓದಿ ಮುಗಿಸುವಾಗಲೇ ನನ್ನ ಪಾತ್ರದ ತೂಕ ಎಷ್ಟಿದೆ ಎನ್ನುವುದು ನನಗೆ ಅರಿವಾಗಿತ್ತು. ಮಿಡಲ್ ಕ್ಲಾಸ್ ಹುಡುಗನಾಗಿ ಕಾಣಿಸಿಕೊಳ್ಳಬೇಕಿತ್ತು. ಅದಕ್ಕಾಗಿ ನನ್ನನ್ನು ನಾನು ಬದಲಾಯಿಸಿಕೊಂಡೆ. ಗಂಟುಮೂಟೆ ಸಿನಿಮಾ ನಂತರ ಕೇವಲ ಒಂದೇ ಪ್ರಕಾರದ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿಬಿಡುವ ಅಪಾಯ ಅವರಿಗೆ ಎದುರಾಗಿತ್ತು. ಅದನ್ನು ಮೀರುವ ಪ್ರಯತ್ನದಲ್ಲಿದ್ದಾಗಲೇ ಟಾಮ್ ಅಂಡ್ ಜೆರ್ರಿ ಸಿನಿಮಾ ಅವರನ್ನು ಅರಸಿ ಬಂಡಿದ್ದು.

ಕನ್ನಡ ಚಿತ್ರರಂಗದಲ್ಲಿ ಇನ್ನೂ ಅಂಬೆಗಾಲಿಕ್ಕುತ್ತಿರುವ ವಿನಯ್ ಸ್ಪಷ್ಟ ಗುರಿಗಳನ್ನು ಹೊಂದಿದ್ದಾರೆ. ಒಬ್ಬ ಕಲಾವಿದ ನೀರಿನಂತೆ ಇರಬೇಕು ಎನ್ನುವುದು ಅವರ ಫಿಲಾಸಫಿ. ಎಂಥಹುದೇ ಪಾತ್ರವಾದರೂ ಕಲಾವಿದ ಅದಕ್ಕೆ ಹೊಂದಿಕೊಳ್ಳಬೇಕು ಎನ್ನುವುದು ಅವರ ಪಾಲಿಸಿ. 

Related Article

ಸಮಾಧಿ ಬಳಿ ಪುನೀತ್ ಪುಣ್ಯ ಸ್ಮರಣೆ: ನಟ ವಿನೋದ್ ರಾಜ್ ರಿಂದ ಅಪ್ಪುಗೆ ಪಿಂಡ ಪ್ರದಾನ

ಅಪ್ಪು ಪುಣ್ಯ ಸ್ಮರಣೆ: ನಾಳೆ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

ಜೈ ಭೀಮ್ ಚಿತ್ರದಲ್ಲಿ ಸೂರ್ಯ ಲಾಯರ್ ಲುಕ್ ಹಿಂದೆ ಬೆಂಗಳೂರು ಮೂಲದ ವಿನ್ಯಾಸಕ ಬಸ್ಸಮ್ ಒಸ್ಮಾನ್!

25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಒಪ್ಪುವ ಮುನ್ನ 84 ಸ್ಕ್ರಿಪ್ಟ್ ತಿರಸ್ಕರಿಸಿದ್ದ ಪ್ರೇಮ್: ಚಿತ್ರರಂಗ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ

ಜನ್ಮದಿನದಂದು ಅನುಷ್ಕಾ ಶೆಟ್ಟಿ ಹೊಸ ಚಿತ್ರ ಘೋಷಣೆ!

'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು, ಅದೇ ಜೀವನ, ಅದೇ ಅಲ್ವ ಸರ್ ವೈರಾಗ್ಯ ಅಂದಿದ್ದರು ಅಪ್ಪು': ರಮೇಶ್ ಅರವಿಂದ್

ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ', 'ಮಿಷನ್ ಮಜ್ನು' ಸದ್ಯದಲ್ಲಿಯೇ ತೆರೆಗೆ: ಕಾತರದಲ್ಲಿ ಅಭಿಮಾನಿಗಳು

SCROLL FOR NEXT