ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಅವರ ಮುಗಿಲ್ ಪೇಟೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಮುಂಬೈ ಮೂಲದ ನಟಿ ಕಯಾದು ಲೋಹರ್ ತಾವು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಇಚ್ಛಿಸುವುದಾಗಿ ಹೇಳಿದ್ದಾರೆ.
ತಾವು ಹೀಗೆ ಬಂಡು ಒಂದೆರಡು ಚಿತ್ರಗಳಲ್ಲಿ ನಟಿಸಿಹೋಗಲು ಬರುತ್ತಿಲ್ಲ. ಬದಲಾಗಿ ತಮಗೆ ದಕ್ಷಿಣ ಭಾರತೀಯ ಚಿತ್ರರಂಗದ ಕುರಿತು ಒಲವು ಇರುವುದಾಗಿಯೂ ಅದರಿಂದಾಗಿ ತಾವು ಇಲ್ಲೆ ನೆಲೆ ಕಂಡುಕೊಳ್ಳಲು ಇಚ್ಛಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ತಮ್ಮನ್ನು ಕನ್ನಡಿಗರು ನೋಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಯಾದು ಅವರು ಮೂಲತಃ ಮಾಡೆಲ್ ಆಗಿದ್ದು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೋರಂಜನ್ ಅವರ ಮುಗಿಲ್ ಪೇಟೆ ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ತಮಗೆ ಕೆಲ ಹಾಡುಗಳು, ರೊಮ್ಯಾಂಟಿಕ್ ಸನ್ನಿವೇಶಗಳು ಇರಬಹುದು ಎಂದುಕೊಂಡಿದ್ದರಂತೆ. ಆದರೆ ಸಿನಿಮಾ ಸೆಟ್ ಗೆ ಮೊದಲ ಬಾರಿ ಕಾಲಿಟ್ಟ ತಕ್ಷಣವೇ ತಾವು ಅಂದುಕೊಂಡಿದ್ದು ಸುಳ್ಳೆಂದು ಅರಿವಾಯಿತೆಂದು ಅವರು ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪುನೀತ್ ಸಾವಿನ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿರುವ ಕುಟುಂಬ: ಅಭಿಮಾನಿಗಳ ಜೊತೆ ಭಜರಂಗಿ 2 ಚಿತ್ರ ವೀಕ್ಷಿಸಿದ ಶಿವಣ್ಣ
ಮನೋರಂಜನ್ ಅವರಲ್ಲಿ ತಾವು ರವಿಚಂದ್ರನ್ ಅಂಶವನ್ನು ಕಂಡಿದ್ದಾಗಿ ಅವರು ಹೇಳಿದ್ದಾರೆ. ಕ್ಯಾಮೆರಾ ಮುಂದೆ ನಟಿಸುವಾಗ ಮನೋರಂಜನ್ ಅವರು ನೀಡಿದ ಪ್ರತಿ ಸಲಹೆ ಕೂಡಾ ನೆರವಾಯಿತು ಎನ್ನುತ್ತಾರೆ ಕಯಾದು. ಮುಂದಿನ ದಿನಗಳಲ್ಲಿ ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಭರತ್ ನಾವುಂದ ನಿರ್ದೇಶಿಸಿರುವ ಮುಗಿಲ್ ಪೇಟೆ ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ.
ಇದನ್ನೂ ಓದಿ: ತನಗಿಂತ ಕಿರಿಯರ ಜೊತೆ ಡೇಟಿಂಗ್ ವಿಚಾರ: ಪ್ರೇಮಕ್ಕೂ ವಯಸ್ಸಿಗೂ ಸಂಬಂಧವಿಲ್ಲ; ಅದು ಸಮಸ್ಯೆಯೇ ಅಲ್ಲ ಎಂದ ನಟಿ ರಶ್ಮಿಕಾ
ತೆಲುಗು ನಟಿಯ ಮೇಲೆ ಅಪರಿಚಿತನಿಂದ ಹಲ್ಲೆ: ಮೊಬೈಲ್ ಕಸಿದು ಪರಾರಿ
ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ
ಐಎಂಡಿಬಿ ಪಟ್ಟಿಯಲ್ಲಿ 'ಶಾವ್ಶಾಂಕ್ ರಿಡೆಂಪ್ಶನ್' ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ 'ಜೈಭೀಮ್'
'ಏಕ್ ಲವ್ ಯಾ' ಚಿತ್ರದ ಹಾಡಿನ ಬಿಡುಗಡೆ ವೇಳೆ ಶಾಂಪೇನ್ ಸಂಭ್ರಮ: ಕ್ಷಮೆ ಕೇಳಿದ ನಿರ್ದೇಶಕ ಪ್ರೇಮ್ ಹಾಗೂ ಚಿತ್ರತಂಡ
ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ