ಶಿವಾಜಿ ಸುರತ್ಕಲ್ 2 ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಶಿವಾಜಿ ಸುರತ್ಕಲ್ 2' ಟ್ರೈಲರ್ ಬಿಡುಗಡೆ; ಮತ್ತೆ ಪತ್ತೇದಾರಿಯಾಗಿ ಕಾಣಿಸಿಕೊಂಡ ನಟ ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.

ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.

ಆಕಾಶ್ ಶ್ರೀವತ್ಸ  ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಚಿತ್ರದ ಟ್ರೈಲರ್ ಅನ್ನು ಶನಿವಾರ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. 

ಚಿತ್ರವು ಶಿವಾಜಿ ಸುರತ್ಕಲ್ ಅವರ ಕುಟುಂಬದ ಭಾಗವನ್ನು ತೋರಿಸುತ್ತದೆ, ಅವರು ತಮ್ಮ ಪತ್ನಿ ಜನನಿ (ರಾಧಿಕಾ ನಾರಾಯಣ್) ಅವರನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಚಿಕ್ಕ ಮಗಳು ಚುಕ್ಕಿ ಅಲಿಯಾಸ್ ಸಿರಿ ಸುರತ್ಕಲ್ ಅವರೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂತ್ರಸ್ತ, ಕೊಲೆಗಾರ ಮತ್ತು ತನ್ನ ನಡುವೆ ಸಂಪರ್ಕವಿದೆ ಎಂಬುದನ್ನು ಆತ ಕಂಡುಕೊಳ್ಳುತ್ತಾನೆ.

ರಮೇಶ್ ಅರವಿಂದ್‌ ಜೊತೆಗೆ ಮೇಘನಾ ಗಾಂವ್ಕರ್ ಕೂಡ ನಟಿಸಿದ್ದು, ಅವರು ಪ್ರಕರಣವನ್ನು ನಿಭಾಯಿಸಲು ಶಿವಾಜಿಗೆ ಸೂಚಿಸುತ್ತಾರೆ. ಜೂಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತದೊಂದಿಗೆ, ಗುರುಪ್ರಸಾದ್ ಎಂಡಿ ಅವರ ಛಾಯಾಗ್ರಹಣವಿದೆ.

ಶಿವಾಜಿ ಸುರತ್ಕಲ್ ಅನ್ನು ಕೆಆರ್‌ಜಿ ಸ್ಟುಡಿಯೋಸ್ ವಿತರಿಸಲಿದ್ದು, ಸಂಗೀತಾ ಶೃಂಗೇರಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ರಘು ರಮಣಕೊಪ್ಪ ಮತ್ತು ವಿದ್ಯಾ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT