ಸ್ಮೃತಿ ಮಂಧಾನ - ರೋಹಿತ್ ಶರ್ಮಾ 
ಕ್ರಿಕೆಟ್

'ನನ್ನ ಹೆಂಡತಿ ನೋಡುತ್ತಾಳೆ...': ಸ್ಮೃತಿ ಮಂಧಾನ ಪ್ರಶ್ನೆಗೆ ರಹಸ್ಯ ಬಿಟ್ಟುಕೊಡದ ರೋಹಿತ್ ಶರ್ಮಾ!

ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು BCCI ಅವಾರ್ಡ್ಸ್ 2025 ರಲ್ಲಿ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.

ಭಾರತದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಮರೆಯುವ ಅಭ್ಯಾಸವಿದೆ ಎಂಬುದು ಬಹಿರಂಗ ರಹಸ್ಯವಾಗಿ ಉಳಿದಿದೆ. ರೋಹಿತ್ ಅವರ ತಂಡದ ಸಹ ಆಟಗಾರರು ಈಗಾಗಲೇ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಮುಂಬೈನಲ್ಲಿ ಶನಿವಾರ ನಡೆದ 'BCCI Awards 2025' ಕಾರ್ಯಕ್ರಮದ ವೇಳೆ ಭಾರತದ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ ನೀಡಿದ ಉತ್ತರ ಇದೀಗ ಎಲ್ಲರನ್ನೂ ಬೆರಗುಗೊಳಿಸಿದೆ.

ರೋಹಿತ್ ಶರ್ಮಾ ಅವರು ಇತ್ತೀಚೆಗೆ ಹೊಸ ಅಥವಾ ತಂಡದ ಇತರ ಸದಸ್ಯರು ಕೀಟಲೆ ಮಾಡುವಂತಹ ಯಾವುದೇ ಹವ್ಯಾಸಗಳನ್ನು ಪ್ರಾರಂಭಿಸಿದ್ದೀರಾ ಎಂದು ಸ್ಮೃತಿ ಪ್ರಶ್ನಿಸುತ್ತಾರೆ. 'ನನಗೆ ಗೊತ್ತಿಲ್ಲ, ನನ್ನ ಮರೆವಿನ ಬಗ್ಗೆ ಅವರು ಕೀಟಲೆ ಮಾಡುತ್ತಾರೆ. ನಿಸ್ಸಂಶಯವಾಗಿ, ಇದು ಹವ್ಯಾಸವಲ್ಲ. ಆದರೆ, ಅವರು ನನ್ನನ್ನು ಗೇಲಿ ಮಾಡುವುದು ಏಕೆಂದರೆ ನಾನು ನನ್ನ ಪರ್ಸ್ ಮತ್ತು ಪಾಸ್‌ಪೋರ್ಟ್ ಅನ್ನು ಮರೆತುಬಿಡುತ್ತೇನೆ. ಇದು ಈಗಿನದಲ್ಲ ಬದಲಿಗೆ ಇದು ಒಂದೆರಡು ದಶಕಗಳ ಹಿಂದೆ ಸಂಭವಿಸಿದ್ದು' ಎಂದು ರೋಹಿತ್ ಹೇಳಿದರು.

ನಂತರ ಸ್ಮೃತಿ ಮಂಧಾನ ಅವರು, ರೋಹಿತ್‌ಗೆ ಅವರು ಮರೆತುಹೋದ ಇತರ ಯಾವುದಾದರೂ ದೊಡ್ಡ ವಿಷಯಗಳ ಬಗ್ಗೆ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, 'ನಾನು ಅದನ್ನು ಹೇಳಲಾರೆ!' ಎಂದು ನಗುತ್ತಾ ಹೇಳಿದರು. 'ಇದು ಲೈವ್ ಆಗುತ್ತಿದ್ದರೆ, ನನ್ನ ಹೆಂಡತಿ ನೋಡುತ್ತಾಳೆ ಮತ್ತು ನಾನು ಅದನ್ನು ಹೇಳಲಾರೆ. ನಾನು ಅದನ್ನು ನನ್ನಲ್ಲಿಯೇ ಇಟ್ಟುಕೊಳ್ಳುತ್ತೇನೆ' ಎಂದು ಭಾರತ ತಂಡದ ನಾಯಕ ಹೇಳಿದರು.

ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು BCCI ಅವಾರ್ಡ್ಸ್ 2025 ರಲ್ಲಿ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಪಡೆದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಇಂದಿಗೂ ಟೆಸ್ಟ್ ಮತ್ತು ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗಳನ್ನು ಹೊಂದಿದ್ದಾರೆ. ಜೊತೆಗೆ 100 ಶತಕಗಳನ್ನು ಗಳಿಸಿದ ಅನನ್ಯ ಸಾಧನೆಯನ್ನು ಹೊಂದಿದ್ದಾರೆ.

ಬಿಸಿಸಿಐನ ವಾರ್ಷಿಕ 'ನಮನ್ ಪ್ರಶಸ್ತಿ' ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

'2023-24ರ ಅತ್ಯುತ್ತಮ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ' ಆಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧಾನ ಅದೇ ಗೌರವ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ, ಇದು ನಾನು ನಿಲ್ಲಿಸಿದ 10 ನೇ ಯುದ್ಧ- ಟ್ರಂಪ್

ಲೋಕಸಭೆಯ ಸ್ಥಾನಗಳು 850ಕ್ಕೆ ಏರಿಕೆಯಿಂದ ಏನು ಲಾಭ?: ಅಮಿತ್ ಶಾ ಹೇಳಿದ್ದಿಷ್ಟು...

ರಾಮ-ಲಕ್ಷ್ಮಣರು ಕದ್ದು ಹಣ್ಣು ತಿಂದರು, ಅದಕ್ಕೆ ಯುದ್ಧ ಆಯ್ತು: ನಗೆಪಾಟಲಿಗೀಡಾದ ಪ್ರಕಾಶ್ ರಾಜ್, Video

ದೇವಸ್ಥಾನಗಳಲ್ಲಿರುವ ಟನ್ ಗಟ್ಟಲೆ ಚಿನ್ನವನ್ನು ಹೊರತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು- ಫಾದರ್ ಪೌಲ್ ಥೆಲಕ್ಕಟ್

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

SCROLL FOR NEXT