ಸಾಂದರ್ಭಿಕ ಚಿತ್ರ  
ರಾಜ್ಯ

ಖಾಸಗಿ ಬಸ್ಸುಗಳ ಟಿಕೆಟ್ ದರ ದುಬಾರಿ: ದೀಪಾವಳಿ ಹಬ್ಬ ರಜೆಯ ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್!

ದೀಪಾವಳಿ ರಜೆಗೆ ಊರು-ಪರವೂರುಗಳಿಗೆ ವಿಸ್ತೃತ ವಾರಾಂತ್ಯವನ್ನು ಕಳೆಯಲು ಬಯಸುವ ಜನರಿಂದ ಖಾಸಗಿ ಬಸ್ ನಿರ್ವಾಹಕರು ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಬಹುದು.

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಇದೆ, ಖುಷಿಯಲ್ಲಿ ಊರಿಗೆ ಹೋಗಿ ಎಂಜಾಯ್ ಮಾಡಿಕೊಂಡು ಬರೋಣ, ಇಲ್ಲದಿದ್ದರೆ ನೆಂಟರು, ಬಂಧುಬಳಗದವರ ಊರುಗಳಿಗೆ ಹೋಗಿ ಖುಷಿಯಾಗಿ ನಾಲ್ಕು ದಿನ ಇದ್ದು ಬರೋಣ ಎಂದು ಅಂದುಕೊಂಡವರಿಗೆ ಖಾಸಗಿ ಬಸ್ಸುಗಳು ಯದ್ವಾತದ್ವಾ ಬೆಲೆ ಏರಿಕೆ ಮಾಡಿರುವುದು ಬಿಗ್ ಶಾಕ್ ನೀಡಿದೆ.

ದೀಪಾವಳಿ ರಜೆಗೆ ಊರು-ಪರವೂರುಗಳಿಗೆ ವಿಸ್ತೃತ ವಾರಾಂತ್ಯವನ್ನು ಕಳೆಯಲು ಬಯಸುವ ಜನರಿಂದ ಖಾಸಗಿ ಬಸ್ ನಿರ್ವಾಹಕರು ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಬಹುದು. ಹಲವಾರು ಮಾರ್ಗಗಳ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿರುವುದರಿಂದ, ಅನೇಕ ಪ್ರಯಾಣಿಕರು ಕನಿಷ್ಠ ಈ ದೀಪಾವಳಿಗೆ ಉಳಿದ ಸಮಯಕ್ಕಿಂತ ಶೇಕಡಾ 60ರಷ್ಟು ಹೆಚ್ಚು ಟಿಕೆಟ್ ಬೆಲೆ ನೀಡಿ ಹೋಗಬೇಕಾಗುತ್ತಿದೆ.

ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಪ್ರಕಾರ, ಈ ಹಬ್ಬದ ಋತುವಿನಲ್ಲಿ ದರಗಳು 60-80% ರಷ್ಟು ಏರಿಕೆಯಾಗಿವೆ. ಉದಾಹರಣೆಗೆ, ಬೆಂಗಳೂರಿನಿಂದ ಹೈದರಾಬಾದ್‌ಗೆ ಸಾಮಾನ್ಯವಾಗಿ 1,200 ರೂ. ಬೆಲೆಯ ಎಸಿ ಸ್ಲೀಪರ್ ಟಿಕೆಟ್ ಈಗ 1,800 ರಿಂದ 2,000 ರೂ.ಗಳ ನಡುವೆ ನಿಗದಿಪಡಿಸಲಾಗಿದೆ. ಬೆಂಗಳೂರು-ಚೆನ್ನೈ ಮಾರ್ಗವು ಸಾಮಾನ್ಯವಾಗಿ 800 ರಿಂದ 900 ರೂ.ಗಳವರೆಗೆ ಇದ್ದು, 1,400 ರಿಂದ 1,500 ರೂ.ಗಳಿಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 1,100 ರೂ. ಬೆಲೆಯ ಬೆಂಗಳೂರು-ಬೆಳಗಾವಿ ಟಿಕೆಟ್ ಈಗ 1,700 ರೂ.ಗಳಷ್ಟಿದೆ.

ಬೆಂಗಳೂರಿನಿಂದ ಮೈಸೂರಿಗೆ ಎಸಿ ಅಲ್ಲದ ಸ್ಲೀಪರ್‌ ಸೀಟು ಬೆಲೆ ಸುಮಾರು 1,000 ರೂ.ಗಳಷ್ಟಿದೆ ಎಂದು TNIE-The New Indian Express ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂದಿದೆ. ಬೆಂಗಳೂರು-ಮಂಗಳೂರುಗೆ, ಎಸಿ ಅಲ್ಲದ ಸ್ಲೀಪರ್‌ಗಳ ದರಗಳು 1,300 ರೂ.ಗಳಾಗಿದ್ದರೆ, ಎಸಿ ಸ್ಲೀಪರ್‌ಗಳ ದರಗಳು ಸುಮಾರು 2,500 ರೂ.ಗಳಷ್ಟಿವೆ.

ಹಬ್ಬದ ದರ ಹೆಚ್ಚಳದ ಬಗ್ಗೆ TNIE ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ್ ಶರ್ಮಾ, ಶಕ್ತಿ ಯೋಜನೆಯು ಖಾಸಗಿ ಬಸ್ ನಿರ್ವಾಹಕರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದರು. ನಾವು 2020 ರಿಂದ ರಸ್ತೆ ತೆರಿಗೆ ಕಡಿತವನ್ನು ಕೋರಿದ್ದೇವೆ. ಆದರೆ ಏನೂ ಮಾಡಿಲ್ಲ ಎಂದು ಸರ್ಕಾರವನ್ನು ಆರೋಪಿಸಿದರು.

ಖಾಸಗಿ ನಿರ್ವಾಹಕರು ಕೋಟಿಗಟ್ಟಲೆ ಹೂಡಿಕೆ ಮಾಡಿ ಉದ್ಯೋಗ ಒದಗಿಸುತ್ತಾರೆ. ಆದರೆ ಸರ್ಕಾರದ ಬೆಂಬಲವನ್ನು ಪಡೆಯುವುದಿಲ್ಲ. ಹಬ್ಬಗಳ ಸಮಯದಲ್ಲಿ, ಶುಲ್ಕ ಹೆಚ್ಚಳಕ್ಕೆ ನಮ್ಮನ್ನು ದೂಷಿಸಲಾಗುತ್ತದೆ, ಇದು ನಮಗೆ ಲಾಭ ಗಳಿಸಲು ಇರುವ ಏಕೈಕ ಸಮಯ. ಕೆಎಸ್‌ಆರ್‌ಟಿಸಿ ಕೂಡ ಫ್ಲೆಕ್ಸಿ-ಫೇರ್ ವ್ಯವಸ್ಥೆಯನ್ನು ಅನುಸರಿಸುತ್ತದೆ. ಶಕ್ತಿ ಯೋಜನೆ ಅಡಿಯಲ್ಲಿ ಮರುಪಾವತಿ ಪಡೆಯುತ್ತದೆ, ಆದರೆ ನಮಗೆ ಏನೂ ಸಿಗುವುದಿಲ್ಲ. ತೆರಿಗೆಗಳನ್ನು ಮನ್ನಾ ಮಾಡಿದರೆ, ನಾವು ಪ್ರತಿ ಸೀಟಿಗೆ 50 ರಿಂದ 100 ರೂ.ಗಳಷ್ಟು ಕಡಿಮೆ ಶುಲ್ಕ ವಿಧಿಸಬಹುದು ಎಂದರು.

ಖಾಸಗಿ ಬಸ್ ನಿರ್ವಾಹಕರ ವಿರುದ್ಧ ಕಠಿಣ ನಿಯಮ ಈಗಾಗಲೇ ನಡೆಯುತ್ತಿದೆ ಎಂದು ಸಾರಿಗೆ ಆಯುಕ್ತ ಯೋಗೀಶ್ ಎ.ಎಂ. ಹೇಳಿದರು. ನಾವು ಸೋಮವಾರದಿಂದ ದೀಪಾವಳಿ ಸುರಕ್ಷತಾ ತಪಾಸಣೆ ಮತ್ತು ಖಾಸಗಿ ಬಸ್‌ಗಳ ವಿರುದ್ಧ ಕ್ರಮವನ್ನು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ, 650 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ದೃಢಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ಅಗ್ನಿ ಅವಘಡ: ಅದೃಷ್ಟವಶಾತ್‌ 68 ಪ್ರಯಾಣಿಕರು ಪಾರು..!

SCROLL FOR NEXT