ಹಲ್ಲೆಗೊಳಗಾದ ವೆಂಕಟೇಶ್ 
ರಾಜ್ಯ

ಗಂಡ-ಹೆಂಡತಿ ಜಗಳ: ಒಂದು ಮಾಡಲು ಹೋದ ಹಿಂದೂ ವ್ಯಕ್ತಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ!

ಬಸ್ ನಿಲ್ದಾಣದಲ್ಲಿ ಯುವತಿ ಹಾಗೂ ಆಕೆಯ ತಾಯಿ ಜೊತೆಯಲ್ಲಿದ್ದ ಹಿಂದೂ ವ್ಯಕ್ತಿ ವೆಂಕಟೇಶ್ ನನ್ನು ನೋಡಿದ ಮುಸ್ಲಿಂ ಯುವಕರ ಗುಂಪು ಕೆರಳಿದ್ದು, ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ತಿಳಿದು ವೆಂಕಟೇಶ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ.

ಬೆಂಗಳೂರು: ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ಯುವತಿ ಹಾಗೂ ಆಕೆಯ ತಾಯಿ ಜೊತೆಯಲ್ಲಿದ್ದ ಹಿಂದೂ ವ್ಯಕ್ತಿ ವೆಂಕಟೇಶ್ ನನ್ನು ನೋಡಿದ ಮುಸ್ಲಿಂ ಯುವಕರ ಗುಂಪು ಕೆರಳಿದ್ದು, ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ತಿಳಿದು ವೆಂಕಟೇಶ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ.

ಪೊಲೀಸ್ ದೂರಿನ ಪ್ರಕಾರ, ಬಸಪಟ್ಟಣ ಗ್ರಾಮದ ಅಜ್ಮೀರ್ ಮತ್ತು ಅಫಿಯಾ ನಡುವೆ ಜಗಳ ಆದ ನಂತರ ಅಫಿಯಾ ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದರು. ಕುಟುಂಬದ ಸ್ನೇಹಿತ ಹಾಗೂ ನೆರೆ ಹೊರೆಯವರಾಗಿದ್ದ ವೆಂಕಟೇಶ್ ನನ್ನು ಅಫಿಯಾ ಜೊತೆಗೆ ಮಾತನಾಡಿ, ಆಕೆಯ ಮನವೊಲಿಸುವಂತೆ ಅಜ್ಮೀರ್ ಕೇಳಿಕೊಂಡಿದ್ದಾಗಿ ವರದಿಯಾಗಿದೆ.

ಈ ಮನವಿ ಹಿನ್ನೆಲೆಯಲ್ಲಿ ವೆಂಕಟೇಶ್ ಬಸ್ ನಿಲ್ದಾಣದ ಹತ್ತಿರ ಹೋಗಿದ್ದಾನೆ. ಅಫಿಯಾ ಮತ್ತು ಆಕೆಯ ಮಕ್ಕಳು ತನ್ನ ತಾಯಿ ಮನೆಗೆ ಹೋಗಲು ಯೋಜಿಸಿದ್ದರು ಎನ್ನಲಾಗಿದೆ.

ಆದರೆ, ಮುಸ್ಲಿಂ ಪುರುಷರ ಗುಂಪು ಅಫಿಯಾ ಮತ್ತು ಆಕೆಯ ಮಕ್ಕಳೊಂದಿಗೆ ವೆಂಕಟೇಶ್ ಇರುವುದನ್ನು ನೋಡಿ, ತಪ್ಪಾಗಿ ತಿಳಿದುಕೊಂಡು ಆತನ ಮೇಲೆ ಹಲ್ಲೆ ನಡೆಸಿದೆ. ಸತ್ಯ ತಿಳಿದ ಸ್ಥಳೀಯರು ವೆಂಕಟೇಶ್ ಅದೇ ಗ್ರಾಮದವನಾಗಿದ್ದು ಯಾವುದೇ ದುರುದ್ದೇಶ ಹೊಂದಿರಲಿಲ್ಲ ಎಂದು ಹೇಳಿದರೂ ದಾಳಿಕೋರರು ಆತನನ್ನು ತೀವ್ರವಾಗಿ ಥಳಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪೊಲೀಸರು ಅಜ್ಮೀರ್, ಖಾಜಾಫೀರ್, ಇಂದ್ರಾವಲಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಜ್ಮೀರ್, ಅಫಿಯಾ, ಮಕ್ಕಳು ಮತ್ತು ವೆಂಕಟೇಶ್ ಪರಸ್ಪರ 15 ವರ್ಷಗಳಿಂದ ಪರಿಚಿತರಾಗಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ವೆಂಕಟೇಶ್ ವಿರುದ್ಧವೂ ಪ್ರತಿದೂರು ದಾಖಲಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದ ಹಲವರು ಪೊಲೀಸ್ ಠಾಣೆಗೆ ಜಮಾಯಿಸಿ ಗಲಾಟೆ ನಡೆಸಿದರು. ಇದರಿಂದ ಪೊಲೀಸ್ ಠಾಣೆ ಹೊರಗೆ ಕಾವೇರಿದ ವಾತವಾರಣ ನಿರ್ಮಾಣವಾಗಿತ್ತು.

ಈ ಘಟನೆಯ ವಿಡಿಯೋಗಳು ವೈರಲ್ ಆಗಿದ್ದು, ನೀಲಿ ಟೀ ಶರ್ಟ್‌ನಲ್ಲಿದ್ದ ಒಬ್ಬ ವ್ಯಕ್ತಿ ಪೊಲೀಸರತ್ತ ಬೆದರಿಸುವ ರೀತಿಯಲ್ಲಿ ಬೆರಳನ್ನು ಅಲ್ಲಾಡಿಸುತ್ತಿರುವುದನ್ನು ತೋರಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಪ್ರತಿಕ್ರಿಯೆ ಇಲ್ಲದೆ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಅಂಗೀಕಾರ; ವಿಪಕ್ಷಗಳ ತೀವ್ರ ಗದ್ದಲ, ಮಧ್ಯಾಹ್ನ 3 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

Thank you, Pakistan: ಭಾರತದ ವಿರುದ್ಧ ಬಾಂಗ್ಲಾದೇಶದ ಹಗೆತನ ಬಟ್ಟ ಬಯಲು!

ನಮ್ಮ ರಾಜಕೀಯ ಶಕ್ತಿಯನ್ನು HDKಗೆ ಧಾರೆ ಎರೆದಿದ್ದೇವೆ: ನಾವು ಬಾಯ್ಬಿಟ್ರೆ ಬ್ಲಾಸ್ಟ್ ಆಗುತ್ತೆ, ಅಭ್ಯರ್ಥಿ ಘೋಷಣೆ ಮಾಡಲು ನಿಖಿಲ್ ಗೆ ಏನು ಅಧಿಕಾರವಿದೆ?

ಬಿಹಾರ ಚುನಾವಣೆ ಪ್ರಶ್ನಿಸಿ ಸುಪ್ರೀಂಗೆ ಪ್ರಶಾಂತ್ ಕಿಶೋರ್ ಅರ್ಜಿ; ಹೊಸದಾಗಿ ಚುನಾವಣೆ ನಡೆಸುವಂತೆ ಮನವಿ!

T20 World Cup 2026: ರನ್ ಗಳಿಸಲು ಸಂಜು ಸ್ಯಾಮ್ಸನ್ ಹೆಣಗಾಟ; ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್ ಜಾಗ ಫಿಕ್ಸ್!

SCROLL FOR NEXT