ಸೀಮಾ ತಪಾರಿಯ 
ಜೀವನಶೈಲಿ

ಲವ್ ಮ್ಯಾರೇಜಿಗಿಂತ ಅರೇಂಜ್ಡ್ ಮ್ಯಾರೇಜ್ ಸಕ್ಸಸ್ ರೇಟ್ ಜಾಸ್ತಿ: ಭಾರತದ ನಂ.1 ಮ್ಯಾಚ್ ಮೇಕರ್ ಹೇಳಿದ ಗುಟ್ಟು

ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಸುಳ್ಳು. ಈಗಿನವರಲ್ಲಿ ಇಗೋ ಸಮಸ್ಯೆ ಇದೆ, ಆರ್ಥಿಕವಾಗಿ ತಾವು ಸಬಲರು ಎನ್ನುವ ಅಹಂ ಇದೆ. ವಿವಾಹ ಸಂಬಂಧಗಳು ಮುರಿದುಬೀಳುವುದಕ್ಕೆ ಇವೇ ಮುಖ್ಯ ಕಾರಣ.

ನವದೆಹಲಿ: ಇಂದಿನ ಯುವಪೀಳಿಗೆ ಅರೇಂಜ್ಡ್ ಮ್ಯಾರೇಜ್ ಬಗ್ಗೆ ಅಸಡ್ಡೆ ತೋರುತ್ತಿರುವ ಬಗ್ಗೆ ಭಾರತದ ನಂಬರ್ 1 ಮ್ಯಾಚ್ ಮೇಕರ್ ಎಂದೇ ಹೆಸರಾಗಿರುವ ಸೀಮಾ ತಪಾರಿಯ ಅವರು ಖೇದ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಯುವಪೀಳಿಗೆಯ ಅಭಿಪ್ರಾಯ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಅರೇಂಜ್ಡ್ ಮ್ಯಾರೇಜಿನಲ್ಲಿ ಎರಡು ಕುಟುಂಬಗಳು ಒಂದಾಗುತ್ತವೆ. ಹುಡುಗ ಮತ್ತು ಹುಡುಗಿ ಮಧ್ಯೆ ಏನೇ ಸಮಸ್ಯೆ ಬಂದರೂ ಕೂತು ಪರಿಹರಿಹರಿಸುವ ಒಂದು ಸವಲತ್ತಿರುತ್ತದೆ. ಅದುವೇ ಅರೇಂಜ್ಡ್ ಮ್ಯಾರೇಜಿನ ಅತಿ ದೊಡ್ಡ ಶಕ್ತಿ. ಆದರೆ ಲವ್ ಮ್ಯಾರೇಜಿನಲ್ಲಿ ಹುಡುಗ ಹುಡುಗಿ ಒಂಟಿಯಾಗುತ್ತಾರೆ. ಅವರ ನಡುವೆ ಭಿನ್ನಾಭಿಪ್ರಾಯ ಬಂದರೆ ಅವರ ಹೆಗಲಿಗೆ ಯಾರೂ ಇರುವುದಿಲ್ಲ.

ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಈಗಿನ ಯುವ ಪೀಳಿಗೆಯವರಲ್ಲಿದೆ. ಆದರೆ ಈಗೀಗ ಮದುವೆ ವಿಚಾರದ ಬಗ್ಗೆ ಅವರು ಹೆಚ್ಚಿನ ತಿಳಿವಳಿಕೆ ಹೊಂದುತ್ತಿದ್ದಾರೆ. ಕೆಲವರಾದರೂ ತಮಗೆ ಅರೇಂಜ್ಡ್ ಮದುವೆಯೇ ಬೇಕು ಎನ್ನುವ ತೀರ್ಮಾನಕ್ಕೆ ಬದ್ಧರಾಗುತ್ತಿದ್ದಾರೆ.

ನೂರಕ್ಕೆ ನೂರು ಪರ್ಸೆಂಟ್ ಮ್ಯಾಚ್ ಆಗುವ ಸಂಗಾತಿ ಯಾರಿಗೂ ಸಿಕ್ಕುವುದಿಲ್ಲ. ಇಬ್ಬರು ವ್ಯಕ್ತಿಗಳು ಯಾವತ್ತೂ ಒಂದೇ ರೀತಿಯಿರಲು ಸಾಧ್ಯವೇ ಇಲ್ಲ. ಹೀಗಾಗಿ ಶೇ. 70 ರಷ್ಟು ಮ್ಯಾಚ್ ಆದರೆ ಹುಡುಗ ಹುಡುಗಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ಆಗಬಹುದು. ಉಳಿದ 30 ಪರ್ಸೆಂಟ್ ಜೀವನ ಇರೋದು ಹೊಂದಾಣಿಕೆಯಲ್ಲಿ.

ಲವ್ ಮ್ಯಾರೇಜೇ ಆಗಲಿ, ಅರೇಂಜ್ಡ್ ಮ್ಯಾರೇಜೇ ಆಗಲಿ ಸತಿಪತಿಯರ ನಡುವೆ ಹೊಂದಾಣಿಕೆ, ತ್ಯಾಗ ಮನೋಭಾವ ಇರಲೇಬೇಕು. ಇದ್ದರೆ ಮಾತ್ರ ಸಂಸರ ಚೆನ್ನಾಗಿರುತ್ತದೆ. ಅದಿರದೇ ಹೋದಲ್ಲಿ ಎಂಥಾ ಮಾದರಿ ಪ್ರೇಮಿಗಳ ನಡುವೆಯೂ ವಿರಸ ಮೂಡುತ್ತದೆ. 

ಈಗಿನವರಲ್ಲಿ ಇಗೋ ಸಮಸ್ಯೆ ಇದೆ, ಆರ್ಥಿಕವಾಗಿ ತಾವು ಸಬಲರು ಎನ್ನುವ ಅಹಂ ಇದೆ. ಈಗಿನವರ ವಿವಾಹ ಸಂಬಂಧಗಳು ಮುರಿದುಬೀಳುವುದಕ್ಕೆ ಅದುವೇ ಮುಖ್ಯ ಕಾರಣ. ಸೀಮಾ ತಪಾರಿಯ ಅವರು ನೆಟ್ ಫ್ಲಿಕ್ಸ್ ನಲ್ಲಿ 'ಇಂಡಿಯನ್ ಮ್ಯಾಚ್ ಮೇಕಿಂಗ್' ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT