ದೇಶ

ನಾನು ಮೋದಿಯ ಕಟ್ಟಾ ವಿರೋಧಿ, ಧೈರ್ಯ ಇದ್ದರೆ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ದಿಗ್ವಿಜಯ್ ಸಿಂಗ್

Lingaraj Badiger

ಭೋಪಾಲ್: ಅಸಹಿಷ್ಣುತೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಆಮಿರ್ ಖಾನ್ ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ಈ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ನಾನು ಮೋದಿಯ ಕಟ್ಟಾ ವಿರೋಧಿ. ಯಾರಿಗಾದರೂ ಧೈರ್ಯ ಇದ್ದರೆ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ. ಆಮಿರ್ ಖಾನ್ ಅವರು ತಮ್ಮ ಮನಸಿನಲ್ಲಿರುವುದನ್ನು ಹೇಳಿದ್ದಾರೆ. ಮೋದಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಸಿಂಗ್ ಆಗ್ರಹಿಸಿದ್ದಾರೆ.

'ಆಮಿರ್ ಖಾನ್ ಅವರು ಒಬ್ಬ ಜನಪ್ರಿಯ ನಟ. ಅವರು ಒಬ್ಬ ಪ್ರಾಮಾಣಿಕ ಮತ್ತು ಅತಿ ಸೂಕ್ಷ್ಮ ವ್ಯಕ್ತಿ. ಅವರು ತಮಗನಿಸಿದ್ದನ್ನು ಹೇಳಿವುದು ತಪ್ಪಾ. ಬಿಜೆಪಿ ನಾಯಕರು ಯಾವಾಗಲೂ ಮೋದಿ ವಿರುದ್ಧ ಮಾತನಾಡುವವರಿಗೆ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳುವುದು ಏಕೆ?' ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.

SCROLL FOR NEXT