ದೇಶ

ನನ್ನ ಅಂಗಾಂಗ ದಾನ ಮಾಡಿ: ಗಲ್ಲಿಗೇರಿದ ನಿರ್ಭಯಾ ಹತ್ಯಾಚಾರಿಯ ಆಸೆ!

Srinivasamurthy VN

ನವದೆಹಲಿ: ಸತತ 8 ವರ್ಷಗಳ ಬಳಿಕ ನಿರ್ಭಯಾ ಹತ್ಯಾಚಾರಿಗಳನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದ್ದು, ಪ್ರಕರಣ ಅಪರಾಧಿಗಳಲ್ಲಿ ಒಬ್ಬ ತನ್ನ ಮರಣಾನಂತರ ತನ್ನ ದೇಹದ ಅಂಗಗಳನ್ನು ದಾನ ಮಾಡುವಂತೆ ಅಧಿಕಾರಿಗಳಲ್ಲಿ ತನ್ನ ಆಸೆ ಹೇಳಿಕೊಂಡಿದ್ದನಂತೆ.

ಹೌದು.. ನಿರ್ಭಯಾ ಹತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿಯಾದ ಮುಖೇಶ್ ಸಿಂಗ್ ತನ್ನನ್ನು ಗಲ್ಲಿಗೇರಿಸಿದ ಬಳಿಕ ತನ್ನ ದೇಹದ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಪತ್ರ ನೀಡಿರುವ ಮುಖೇಶ್ ಸಿಂಗ್ ತನ್ನ ಕೊನೆಯ ಕ್ಷಣದಲ್ಲಿ ಅತೀವ ಭಾವುಕನಾಗಿದ್ದ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ.

ಇನ್ನು ಪ್ರಕರಣದ ಮತ್ತೋರ್ವ ಅಪರಾಧಿ ವಿನಯ್ ಶರ್ಮಾ ಜೈಲಿನ ಸೂಪರಿಂಟೆಡ್ ಗೆ ತಾನು ಜೈಲಿನಲ್ಲಿದ್ದಾಗ ರಚಿಸಿದ್ದ ಪೇಯಿಂಟಿಂಗ್ಸ್ ಗಳನ್ನು ನೀಡಿದ್ದಾನೆ. ಅಂತೆಯೇ ತನ್ನ ಬಳಿ ಇದ್ದ ಹನುಮಾನ್ ಚಾಲೀಸಾ ಮತ್ತು ಕೆಲ ಫೋಟೋಗಳನ್ನು ತನ್ನ ಕುಟುಂಬಸ್ಥರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ.

ಆದರೆ ತೀವ್ರ ದುಃಖದಲ್ಲಿದ್ದ ಮತ್ತಿಬ್ಬರು ಅಪರಾಧಿಗಳಾದ ಪವನ್ ಗುಪ್ತಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಯಾವುದೇ ರೀತಿಯ ಮಾತುಗಳನ್ನಾಡದೇ ಅಂತಿಮ ಕ್ಷಣದವರೆಗೂ ಮೌನವಾಗಿದ್ದರು. ಅಪರಾಧಿಗಳೆಲ್ಲರೂ ಲಿಖಿತ ರೂಪದಲ್ಲಿ ತಮ್ಮ ತಮ್ಮ ಕೊನೆಯ ಆಸೆಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಬನ್ಸಾಲ್ ಸಮ್ಮುಖದಲ್ಲಿ ಪತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ.

Related Article

ನ್ಯಾಯ ದೊರೆತರೂ ಮತ್ತೆ ಸುಪ್ರೀಂಕೋರ್ಟ್ ಕದತಟ್ಟಿದ ನಿರ್ಭಯಾ ತಾಯಿ!

ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ: ಗಣ್ಯರು, ರಾಜಕೀಯ ನಾಯಕರು ಹೇಳಿದ್ದೇನು?

ನಿರ್ಭಯಾ ರಕ್ಕಸರಿಗೆ ಕೊನೆಗೂ ಶಿಕ್ಷೆ: ಗಲ್ಲು ಜಾರಿ ಶಿಕ್ಷೆ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ಮಾಹಿತಿ...

ಊಟ ಬಿಟ್ಟು, ರಾತ್ರಿನಿದ್ರೆಯಿಲ್ಲದೆ ಆತಂಕದಲ್ಲೇ ಕಾಲ ಕಳೆದ 'ನಿರ್ಭಯಾ' ಹಂತಕರು

ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು: ನೆಟ್ಟಿಗರಿಂದ ಸಂಭ್ರಮ, ಮುಂಜಾನೆಯೇ ಟ್ರೆಂಡ್ ಆಯ್ತು '#NirbhayaVerdict'

ನಿರ್ಭಯಾ 'ಹತ್ಯಾಚಾರಿ'ಗಳಿಗೆ ಗಲ್ಲು: 7 ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ಸಿಕ್ಕ ಜಯ, ಎಲ್ಲೆಡೆ ಮುಗಿಲು ಮುಟ್ಟಿದ ಸಂಭ್ರಮ

ಕೊನೆಗೂ ನ್ಯಾಯ ದೊರಕಿದೆ- ನಿರ್ಭಯಾ ಪೋಷಕರ ಸಂತಸ

ನಿರ್ಭಯಾ ಗ್ಯಾಂಗ್ ರೇಪ್: ನಾಲ್ವರು ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಜಾರಿ

ಸುಪ್ರೀಂನಲ್ಲೂ ಅತ್ಯಾಚಾರಿಗಳ ಅರ್ಜಿ ವಜಾ: ಗಲ್ಲು  ಶಿಕ್ಷೆಗೆ ಕ್ಷಣಗಣನೆ

SCROLL FOR NEXT