ಕೊಲೆಯಾದ ವೆಟ್ರಿವೇಲ್ 
ದೇಶ

ಕಾಂಚೀಪುರಂ: ಚರ್ಚ್ ಬಳಿ ಯುವಕನ ರುಂಡ, ಕಿ.ಮೀ ದೂರದ ಕ್ವಾರಿಯಲ್ಲಿ ಮುಂಡ; ಕೊಲೆ ಹಿಂದೆ ಪ್ರತೀಕಾರದ ಹೊಗೆ!

ಪರಿಚಯಸ್ಥರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಚರ್ಚ್ ನಿಂದ ಹೊರಬರುತ್ತಿದ್ದ ಅಭಿಷೇಕ್ ಎಂಬಾತನನ್ನು ಕಳೆದ ವರ್ಷ ವೆಟ್ರಿವೇಲ್ ತಂಡ ಹತ್ಯೆ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ ವೆಟ್ರಿವೇಲ್ ರುಂಡ ಪತ್ತೆಯಾಗಿದೆ.

ಚೆನ್ನೈ: ಯುವಕನ ತಲೆಯನ್ನು ಕತ್ತರಿಸಿ ರುಂಡವನ್ನು ಚರ್ಚ್ ಮುಂದೆ ಎಸೆದಿರುವ ಭೀಕರ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಎರುಮಯುರ್ ನಗರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ 21 ವರ್ಷದ ವೆಟ್ರಿವೆಲ್ ಎಂದು ತಿಳಿದುಬಂದಿದೆ. ವೆಟ್ರಿವೆಲ್ ಕಾಲೇಜು ವಿದ್ಯಾರ್ಥಿಯಾಗಿದ್ದು ಗ್ಯಾಂಗ್ ಕಟ್ಟಿಕೊಂಡು 2020ರ ಅಕ್ಟೋಬರ್ ತಿಂಗಳಲ್ಲಿ ಅಭಿಷೇಕ್ ಎಂಬುವನನ್ನು ಹತ್ಯೆ ಮಾಡಿದ್ದ. 

ಅಭಿಷೇಕ್ ಪರಿಚಯಸ್ಥರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಚರ್ಚ್ ನಿಂದ ಹೊರಬರುತ್ತಿರುವ ವೇಳೆ ವೆಟ್ರಿವೇಲ್ ತಂದ ಆತನನ್ನು ಹತ್ಯೆ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ ವೆಟ್ರಿವೇಲ್ ರುಂಡ ಪತ್ತೆಯಾಗಿದೆ. ಪೊಲೀಸರು ವೆಟ್ರಿವೇಲ್ ಕೊಲೆಯ ಹಿಂದೆ ಹಳೆಯ ದ್ವೇಷ ಇರಬಹುದು ಎಂದು ಶಂಕಿಸಿದ್ದಾರೆ.

ವೆಟ್ರಿವೇಲ್ ನ ಉಳಿದ ದೇಹ ಚರ್ಚ್ ನಿಂದ ಹಲವಾರು ಕಿ.ಮೀ ದೂರದ ಕಲ್ಲು ಕ್ವಾರಿಯ ಬಳಿ ಪತ್ತೆಯಾಗಿದೆ. ಅಭಿಷೇಕ್ ಕೊಲೆಗೂ ಹಳೆಯ ದ್ವೇಷವೇ ಕಾರಣ ಎನ್ನುವುದು ವಿಪರ್ಯಾಸ. ಅಭಿಷೇಕ್ ನ ಸಹೋದರ ಈ ಹಿಂದೆ ವೆಟ್ರಿವೇಲ್ ಗ್ಯಾಂಗ್ ಸದಸ್ಯನನ್ನು ಕೊಲೆ ಮಾಡಲು ಯತ್ನಿಸಿತ್ತು. ಅದಕ್ಕೆ ಪ್ರತೀಕಾರವಾಗಿ ವೆಟ್ರಿವೇಲ್ ಅಭಿಷೇಕ್ ಹತ್ಯೆಗೆ ಸಂಚು ರೂಪಿಸಿ ಕೊಲೆಗೈದಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT