ಎಂ ಕೆ ಸ್ಟಾಲಿನ್ 
ದೇಶ

ಇತಿಹಾಸ ತಿರುಚುವಿಕೆ, "ಕಾಲ್ಪನಿಕ ಕಥೆ" ಸೃಷ್ಟಿ ದೇಶಕ್ಕೆ ಅತ್ಯಂತ ಅಪಾಯ: ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ಇತಿಹಾಸ ತಿರುಚುವಿಕೆ ಮತ್ತು ಕೆಲವರು "ಕಾಲ್ಪನಿಕ ಕಥೆ"ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ "ಅಪಾಯಕಾರಿ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಚೆನ್ನೈ: ಇತಿಹಾಸ ತಿರುಚುವಿಕೆ ಮತ್ತು ಕೆಲವರು "ಕಾಲ್ಪನಿಕ ಕಥೆ"ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ "ಅಪಾಯಕಾರಿ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಇತಿಹಾಸ ಕಾಂಗ್ರೆಸ್‌ನ 81ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡು ಸಿಎಂ, ತಮ್ಮ ಸರ್ಕಾರ ಜಾತ್ಯತೀತವಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದರು.

ಇತಿಹಾಸವನ್ನು ಅಧ್ಯಯನ ಮಾಡುವುದರಿಂದ ಯಾವುದೇ ಲಾಭ ಇಲ್ಲ. ಅದರಿಂದ ನೌಕರಿ ಸಿಗುತ್ತದೆಯೇ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಕೇವಲ ಪದವಿ ಮತ್ತು ಸಂಬಳಕ್ಕಾಗಿ ಇತಿಹಾಸ ಅಧ್ಯಯನ ಮಾಡಬಾರದು ಸ್ಟಾಲಿನ್ ಹೇಳಿದರು.

"ನಮ್ಮನ್ನು ತಿಳಿದುಕೊಳ್ಳಲು ನಾವು ಇತಿಹಾಸವನ್ನು ಅಧ್ಯಯನ ಮಾಡಬೇಕು. ಭೂತಕಾಲವನ್ನು ಅಧ್ಯಯನ ಮಾಡಿದವರು ಮಾತ್ರ ವರ್ತಮಾನದಲ್ಲಿ ಇತಿಹಾಸವನ್ನು ಸೃಷ್ಟಿಸಬಹುದು; ಭವಿಷ್ಯವನ್ನು ಊಹಿಸಬಹುದು. ಅಂತಹ ಇತಿಹಾಸವು ವಿಜ್ಞಾನ ಆಧಾರಿತ ಸತ್ಯವಾಗಿರಬೇಕು. ಕೆಲವರು ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಅದೇ ಇತಿಹಾಸ ಎಂದು ಹೇಳುತ್ತಾರೆ. ಜನ ಅವರನ್ನು ನಂಬಿ ಮೂರ್ಖರಾಗುತ್ತಾರೆ. ಆದರೆ ಅದನ್ನು ನಾವು ಒಪ್ಪಿಕೊಳ್ಳಬಾರದು ” ಎಂದು ಸ್ಟಾಲಿನ್ ಹೇಳಿದರು.

ಪ್ರಜ್ಞಾವಂತ ಸಮಾಜವು ಅಂತಹ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಟಾಲಿನ್ ತಿಳಿಸಿದರು.

ಇಂದು ದೇಶವನ್ನು ಆವರಿಸಿರುವ ಅಪಾಯ ಎಂದರೆ ಈ ಇತಿಹಾಸ ತಿರುಚುವಿಕೆ. ಶಿಕ್ಷಣ, ಭಾಷೆ, ಸಂಸ್ಕೃತಿ, ಅಧಿಕಾರ, ಆರ್ಥಿಕತೆ ಮತ್ತು ಆಡಳಿತದಲ್ಲಿ ಸಂವಿಧಾನದ ಘನತೆ ಕಾಪಾಡಬೇಕು ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT