ದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಗಗನಯಾನ ಮಿಷನ್‌ನ ಪತ್ರಿಕಾಗೋಷ್ಠಿಯಲ್ಲಿ ಗಗನಯಾತ್ರಿ ಶುಭಾಂಶು ಶುಕ್ಲಾ 
ದೇಶ

ಸ್ವಂತ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಭಾರತ ಚಿಂತನೆ: ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ

“ಭಾರತ ಇಂದಿಗೂ ಬಾಹ್ಯಾಕಾಶದಿಂದ ಅತ್ಯಂತ ಸುಂದರವಾಗಿ ಕಾಣುತ್ತದೆ ಜೈ ಹಿಂದ್, ಜೈ ಭಾರತ್'' ಎಂದು ಹೇಳಿದರು.

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮಾದರಿಯಲ್ಲಿ ಭಾರತ ತನ್ನದೇ ಆದ ಭಾರತ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ತಮ್ಮ ಮೊದಲ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಸಿಯಮ್ -4 ಕಾರ್ಯಾಚರಣೆಯನ್ನು ಸುಗಮಗೊಳಿಸಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಇಸ್ರೋ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

“ಭಾರತ ಇಂದಿಗೂ ಬಾಹ್ಯಾಕಾಶದಿಂದ ಅತ್ಯಂತ ಸುಂದರವಾಗಿ ಕಾಣುತ್ತದೆ ಜೈ ಹಿಂದ್, ಜೈ ಭಾರತ್'' ಎಂದು ಹೇಳಿದರು.

ಶುಭಾಂಶು ಶುಕ್ಲಾ ಪಯಣ

ಜೂನ್ 26 ರಂದು ಶುಭಾಂಶು ಶುಕ್ಲಾ ಐಎಸ್ ಎಸ್ ನಲ್ಲಿ ಡಾಕ್ ಮಾಡಿ ಜುಲೈ 15 ರಂದು ಭೂಮಿಗೆ ಮರಳಿದರು. ಅವರು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪಯಣ ನಡೆಸಿದ್ದರು. ಬಾಹ್ಯಾಕಾಶದಲ್ಲಿ ಅವರ ವಾಸ್ತವ್ಯದ ಸಮಯದಲ್ಲಿ, ಅವರು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಇಸ್ರೋ ಅಧ್ಯಕ್ಷರೊಂದಿಗೆ ಸಂವಹನ ನಡೆಸಿದ್ದರು.

ಅನ್‌ಡಾಕ್ ಮತ್ತು ಸ್ಪ್ಲಾಶ್‌ಡೌನ್ ನಂತರ, ಶುಭಾಂಶು ಶುಕ್ಲಾ ಜುಲೈ 15-22 ರಿಂದ ಪುನರ್ವಸತಿಗೆ, ಆಗಸ್ಟ್ 1-13 ರವರೆಗೆ ಮಿಷನ್ ಡಿಬ್ರೀಫಿಂಗ್‌ಗೆ ಒಳಗಾಗಿ ಆಗಸ್ಟ್ 17 ರಂದು ಭಾರತಕ್ಕೆ ಮರಳಿದ್ದರು.

ಐಎಸ್ಎಸ್ ಕಾರ್ಯಾಚರಣೆಯಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸಿದ್ದು, ಸಕಾಲಿಕ ಆಮ್ಲಜನಕ ಸೋರಿಕೆಯನ್ನು ಪತ್ತೆಹಚ್ಚುವ ಮೂಲಕ, ಇದು ಕಾರ್ಯಾಚರಣೆಯನ್ನು ವಿಳಂಬಗೊಳಿಸಿ ಅಂತಿಮವಾಗಿ ಸಂಭಾವ್ಯ ವಿಪತ್ತನ್ನು ತಡೆಯಿತು. ಆರಂಭದಲ್ಲಿ ಜೂನ್ 11 ರಂದು ಈ ಕಾರ್ಯಾಚರಣೆಯನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು, ಜೂನ್ 10 ರಂದು ಇಸ್ರೋ ದೋಷವನ್ನು ಪತ್ತೆಹಚ್ಚಿ ಬಾಹ್ಯಾಕಾಶ ಯಾನ ವಿಳಂಬಕ್ಕೆ ಕಾರಣವಾಗಿತ್ತು.

ಇಸ್ರೊ ಪಾತ್ರ

ಫಾಲ್ಕನ್ -9 ರಾಕೆಟ್‌ನ ಮೊದಲ ಹಂತದಲ್ಲಿ ಕಂಡುಬಂದ ದ್ರವ ಆಮ್ಲಜನಕ ಸೋರಿಕೆಯನ್ನು ಪರಿಹರಿಸುವ ಮೂಲಕ ಕಾರ್ಯಾಚರಣೆಯ ಸುರಕ್ಷಿತ ಉಡಾವಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇಸ್ರೋದ ತಾಂತ್ರಿಕ ಪರಿಣತಿಯು ಪ್ರಮುಖ ಪಾತ್ರ ವಹಿಸಿ ದುರಂತದ ವೈಫಲ್ಯವನ್ನು ತಪ್ಪಿಸಿತು ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣ ಹೇಳಿದ್ದಾರೆ. ಇಸ್ರೋ ತಂಡವು ನಾಲ್ಕು ಗಗನಯಾತ್ರಿಗಳ ಜೀವ ಉಳಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣ ಹೇಳಿದ್ದಾರೆ.

ಐಎಸ್ಎಸ್ ಮಿಷನ್, ಕಾರ್ಯಾಚರಣಾ ಕಾರ್ಯವಿಧಾನಗಳು ಮತ್ತು ತಾಂತ್ರಿಕ ಪ್ರೋಟೋಕಾಲ್‌ಗಳ ಕಲಿಕೆಗಳು ಗಗನಯಾನ ಮತ್ತು ಭಾರತೀಯ ಅಂತರಿಕ್ಷ ನಿಲ್ದಾಣ ಕಾರ್ಯಕ್ರಮಗಳ ಉಡಾವಣೆಗೆ ಸಹಾಯ ಮಾಡುತ್ತವೆ ಎಂದು ಇಸ್ರೋ ಮುಖ್ಯಸ್ಥರು ಒತ್ತಿ ಹೇಳಿದರು.

ಐಎಸ್ಎಸ್‌ನಲ್ಲಿದ್ದ ಸಮಯದಲ್ಲಿ, ಶುಕ್ಲಾ ಮಾನವ ಆರೋಗ್ಯ, ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಕೃಷಿ, ಅರಿವಿನ ವಿಜ್ಞಾನ, ಗಗನಯಾತ್ರಿ ಪೋಷಣೆ, ಬಾಹ್ಯಾಕಾಶ ಜೀವಶಾಸ್ತ್ರ ಮತ್ತು ಜೈವಿಕ ಪುನರುತ್ಪಾದಕ ಜೀವನ ಬೆಂಬಲ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದ ಏಳು ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ನಡೆಸಿದರು. ಈ ಸಂಶೋಧನೆಯು ಭಾರತೀಯ ವಿಜ್ಞಾನ ಮತ್ತು ಸಂಶೋಧನೆಗೆ ಅಪಾರ ಪ್ರಮಾಣದ ದತ್ತಾಂಶವನ್ನು ಒದಗಿಸಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ Kohli

SCROLL FOR NEXT