ರಾಜ್ ಠಾಕ್ರೆ, ಉದ್ಧವ್ ಠಾಕ್ರೆ 
ದೇಶ

'ಧೈರ್ಯವಿದ್ದರೆ ನನ್ನನ್ನು ಮಹಾರಾಷ್ಟ್ರದಿಂದ ಓಡಿಸಿ': ಠಾಕ್ರೆ ಸಹೋದರರಿಗೆ ಖ್ಯಾತ ವ್ಯಕ್ತಿಯಿಂದ ಬಹಿರಂಗ ಸವಾಲು!

ಇದಕ್ಕೆ ಪ್ರತಿಯಾಗಿ, ಎಂಎನ್‌ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮರಾಠಿ ಭಾಷೆಯ ವಿರುದ್ಧ ಆಂದೋಲನಕ್ಕೆ ಇಳಿದಿರುವ ಬೆನ್ನಲ್ಲೇ, ಠಾಕ್ರೆ ಸಹೋದರರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರದಿಂದ ತಮ್ಮನ್ನು ಓಡಿಸಲು ಖ್ಯಾತ ವ್ಯಕ್ತಿಯೊಬ್ಬರು ಸವಾಲು ಹಾಕಿದ್ದಾರೆ.

ನಿರಾಹುವಾ ಎಂದೇ ಖ್ಯಾತರಾಗಿರುವ ನಟ ಮತ್ತು ಗಾಯಕ ದಿನೇಶ್ ಲಾಲ್ ಯಾದವ್ ಭೋಜ್‌ಪುರಿಯಲ್ಲಿ ಮಾತನಾಡಿದ್ದಕ್ಕಾಗಿ ತಮ್ಮನ್ನು ಮಹಾರಾಷ್ಟ್ರದಿಂದ ಓಡಿಸುವಂತೆ ಠಾಕ್ರೆ ಸಹೋದರರಿಗೆ ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತಿಯಾಗಿ, ಎಂಎನ್‌ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.

ಯಾದವ್ 2024 ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ವಿರುದ್ಧ ಅಜಮ್‌ಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

"ನಾನು ಬಹಿರಂಗ ಸವಾಲು ನೀಡುತ್ತಿದ್ದೇನೆ. ನನಗೆ ಮರಾಠಿ ಮಾತನಾಡಲು ಬರುವುದಿಲ್ಲ. ನಾನು ಭೋಜ್‌ಪುರಿ ಮಾತನಾಡುತ್ತೇನೆ ಮತ್ತು ನಾನು ಮಹಾರಾಷ್ಟ್ರದಲ್ಲೇ ಇದ್ದೇನೆ. ನೀವು ಬಡವರನ್ನು ಏಕೆ ಓಡಿಸುತ್ತಿದ್ದೀರಿ? ನಿಮಗೆ ಧೈರ್ಯವಿದ್ದರೆ ನನ್ನನ್ನು ಓಡಿಸಿ. ಮುಂಬೈನಲ್ಲಿಯೂ ಸಹ ನಾನು ನಿಮಗೆ ಸವಾಲು ನೀಡುತ್ತಿದ್ದೇನೆ" ಎಂದು ಯಾದವ್ ವರದಿಗಾರರಿಗೆ ತಿಳಿಸಿದರು.

ಭಾಷೆಯ ಮೇಲೆ ಜನರಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳ ಹಿಂದೆ ರಾಜಕೀಯವಿದೆ ಎಂದು ಅವರು ಆರೋಪಿಸಿದರು. "ದೇಶದ ಸೌಂದರ್ಯವೆಂದರೆ ಭಾಷೆಗಳ ವೈವಿಧ್ಯತೆ ಮತ್ತು ವಿಭಿನ್ನ ಮಾತೃಭಾಷೆಗಳನ್ನು ಮಾತನಾಡುವ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ನೀವು ಈ ಸೌಂದರ್ಯವನ್ನು ನಾಶಮಾಡಲು ಬಯಸುತ್ತೀರಿ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!

Ramayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ