ರಾಜ್ ಠಾಕ್ರೆ, ಉದ್ಧವ್ ಠಾಕ್ರೆ 
ದೇಶ

'ಧೈರ್ಯವಿದ್ದರೆ ನನ್ನನ್ನು ಮಹಾರಾಷ್ಟ್ರದಿಂದ ಓಡಿಸಿ': ಠಾಕ್ರೆ ಸಹೋದರರಿಗೆ ಖ್ಯಾತ ವ್ಯಕ್ತಿಯಿಂದ ಬಹಿರಂಗ ಸವಾಲು!

ಇದಕ್ಕೆ ಪ್ರತಿಯಾಗಿ, ಎಂಎನ್‌ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮರಾಠಿ ಭಾಷೆಯ ವಿರುದ್ಧ ಆಂದೋಲನಕ್ಕೆ ಇಳಿದಿರುವ ಬೆನ್ನಲ್ಲೇ, ಠಾಕ್ರೆ ಸಹೋದರರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರದಿಂದ ತಮ್ಮನ್ನು ಓಡಿಸಲು ಖ್ಯಾತ ವ್ಯಕ್ತಿಯೊಬ್ಬರು ಸವಾಲು ಹಾಕಿದ್ದಾರೆ.

ನಿರಾಹುವಾ ಎಂದೇ ಖ್ಯಾತರಾಗಿರುವ ನಟ ಮತ್ತು ಗಾಯಕ ದಿನೇಶ್ ಲಾಲ್ ಯಾದವ್ ಭೋಜ್‌ಪುರಿಯಲ್ಲಿ ಮಾತನಾಡಿದ್ದಕ್ಕಾಗಿ ತಮ್ಮನ್ನು ಮಹಾರಾಷ್ಟ್ರದಿಂದ ಓಡಿಸುವಂತೆ ಠಾಕ್ರೆ ಸಹೋದರರಿಗೆ ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತಿಯಾಗಿ, ಎಂಎನ್‌ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.

ಯಾದವ್ 2024 ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ವಿರುದ್ಧ ಅಜಮ್‌ಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

"ನಾನು ಬಹಿರಂಗ ಸವಾಲು ನೀಡುತ್ತಿದ್ದೇನೆ. ನನಗೆ ಮರಾಠಿ ಮಾತನಾಡಲು ಬರುವುದಿಲ್ಲ. ನಾನು ಭೋಜ್‌ಪುರಿ ಮಾತನಾಡುತ್ತೇನೆ ಮತ್ತು ನಾನು ಮಹಾರಾಷ್ಟ್ರದಲ್ಲೇ ಇದ್ದೇನೆ. ನೀವು ಬಡವರನ್ನು ಏಕೆ ಓಡಿಸುತ್ತಿದ್ದೀರಿ? ನಿಮಗೆ ಧೈರ್ಯವಿದ್ದರೆ ನನ್ನನ್ನು ಓಡಿಸಿ. ಮುಂಬೈನಲ್ಲಿಯೂ ಸಹ ನಾನು ನಿಮಗೆ ಸವಾಲು ನೀಡುತ್ತಿದ್ದೇನೆ" ಎಂದು ಯಾದವ್ ವರದಿಗಾರರಿಗೆ ತಿಳಿಸಿದರು.

ಭಾಷೆಯ ಮೇಲೆ ಜನರಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳ ಹಿಂದೆ ರಾಜಕೀಯವಿದೆ ಎಂದು ಅವರು ಆರೋಪಿಸಿದರು. "ದೇಶದ ಸೌಂದರ್ಯವೆಂದರೆ ಭಾಷೆಗಳ ವೈವಿಧ್ಯತೆ ಮತ್ತು ವಿಭಿನ್ನ ಮಾತೃಭಾಷೆಗಳನ್ನು ಮಾತನಾಡುವ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ನೀವು ಈ ಸೌಂದರ್ಯವನ್ನು ನಾಶಮಾಡಲು ಬಯಸುತ್ತೀರಿ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT