ಮಗುವಿನ ಜೊತೆ ಸಿಎಂ ಯೋಗಿ ಆದಿತ್ಯನಾಥ್  
ದೇಶ

ಸಿಎಂ ಯೋಗಿ ಆದಿತ್ಯನಾಥ್ ಬಳಿ ಕ್ಯೂಟ್ ಆಗಿ ಮಗು ಏನು ಬೇಡಿಕೆ ಇಟ್ಟಿತು ನೋಡಿ-Viral Video

ಮಗುವಿನ ಒಂದು ಪದದ ಸ್ಪಷ್ಟ ಉತ್ತರ ಮತ್ತು ಇದೇ ವಸ್ತು ಬೇಕೆಂದು ಕೇಳುತ್ತಿರುವುದು ನೆಟ್ಟಿಗರ ಮನಗೆದ್ದಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮಗುವೊಂದು ಮುಗ್ಧವಾಗಿ ಚಿಪ್ಸ್ ಬೇಕೆಂದು ಕೇಳುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೀಡಿಯೊದಲ್ಲಿ, ಯೋಗಿ ಆದಿತ್ಯನಾಥ್ ಅವರು ಮಗುವಿನ ಪಕ್ಕದಲ್ಲಿ ಕುಳಿತುಕೊಂಡು, ಏನು ಬೇಕು ಎಂದು ನಿಧಾನವಾಗಿ ಕೇಳುತ್ತಾರೆ, ಮಗು ನಾಚಿಕೆಯಿಂದ ಮುಗ್ಧವಾಗಿ ಚಿಪ್ಸ್ ಬೇಕೆಂದು ಕೇಳುತ್ತದೆ, ಆಗ ಸಿಎಂ ಸೇರಿದಂತೆ ಅಲ್ಲಿದ್ದವರೆಲ್ಲರೂ ನಗುತ್ತಾರೆ.

ವೈರಲ್ ಆಗುತ್ತಿರುವ ವಿಡಿಯೊ ಕ್ಲಿಪ್ ನಲ್ಲಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, "ಔರ್ ಕ್ಯಾ ಚಾಹಿಯೇ ಹೈ, ಬತಾವೋ" ಎಂದು ಕೇಳುತ್ತಾರೆ. ಮಗು ಬಾಗಿ ಅವರ ಕಿವಿಯಲ್ಲಿ "ಚಿಪ್ಸ್" ಪಿಸುಗುಟ್ಟುತ್ತದೆ, ಇದಕ್ಕೆ ಮುಖ್ಯಮಂತ್ರಿಗಳಿಗೆ ನಗು ತಡೆಯಲಾಗುವುದಿಲ್ಲ.

ಚಿಪ್ಸ್ ಮಾಂಗ್ ರಹಾ ಹೈ

‘ಕ್ಲಿಯರ್ ಥಿಂಕಿಂಗ್ ಇಸ್ಕೋ ಬೋಲ್ತಾ ಹೈ, ಇಂಟರ್ನೆಟ್ ಜೋಕ್ಸ್

ಮಗುವಿನ ಒಂದು ಪದದ ಸ್ಪಷ್ಟ ಉತ್ತರ ಮತ್ತು ಇದೇ ವಸ್ತು ಬೇಕೆಂದು ಕೇಳುತ್ತಿರುವುದು ನೆಟ್ಟಿಗರ ಮನಗೆದ್ದಿದೆ. ಹಲವಾರು ಜನರು ಮಗುವಿನ ಉತ್ತರವನ್ನು ಶ್ಲಾಘಿಸಿದ್ದಾರೆ. ಕ್ಲಿಯರ್ ಥಿಂಕಿಂಗ್ ಇಸ್ಕೋ ಬೋಲ್ತಾ ಹೈ ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಮಗುವಿನ ಆದ್ಯತೆಗಳನ್ನು ವಿಂಗಡಿಸಲಾಗಿದೆ ಎಂದು ಬರೆದಿದ್ದಾರೆ.

“ನ್ಯಾನೋ ಚಿಪ್ಸ್ ಮಾಂಗ್ ರಹಾ ಹೈ ಫಾರ್ ಉತ್ತರ ಪ್ರದೇಶ,” ಎಂದು ಬಳಕೆದಾರರು ತಮಾಷೆ ಮಾಡಿದ್ದಾರೆ.

“ಗ್ರೀನ್ ಲೇಸ್ ಮತ್ ದೇನಾ ಲಾಲ್ ವಾಲಾ ದೇನಾ,” ಎಂದು ಖಾತೆಯೊಂದು ವ್ಯಂಗ್ಯವಾಡಿದೆ.

ಮತ್ತೊಬ್ಬರು, “ತುಮ್ ಯೋಗಿ ಜಿ ಸೆ ಏಕ್ ಜಿಲಾ ಮಾಂಗ್ ಸಕ್ತೇ ದಿ. ಲೇಕಿನ್ ಮಾಂಗಾ ಹೋ ಬಸ್ ಏಕ್ ಚಿಪ್ಸ್…. ತುಂಬಾ ಮುದ್ದಾದ ವಿಡಿಯೋ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಗೋರಖನಾಥ ದೇವಸ್ಥಾನಕ್ಕೆ ಭೇಟಿ

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಯೋಗಿ ಆದಿತ್ಯನಾಥ್ ಗೋರಖನಾಥ ದೇವಸ್ಥಾನದಲ್ಲಿ ಸಾಂಪ್ರದಾಯಿಕ “ಖಿಚ್ಡಿ”ಯನ್ನು ಅರ್ಪಿಸಿದರು, ಇದು ವಾರ್ಷಿಕ ಖಿಚ್ಡಿ ಮೇಳದ ಆರಂಭವನ್ನು ಗುರುತಿಸುತ್ತದೆ. ಗೋರಕ್ಷಪೀಠಾಧೀಶ್ವರರೂ ಆಗಿರುವ ಯೋಗಿ ಆದ್ಯತ್ಯನಾಥ್, ನಾಥ ಪಂಥದ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳಿಗೆ ಅನುಗುಣವಾಗಿ ನಸುಕಿನ ಜಾವ 4 ಗಂಟೆ ಸುಮಾರಿಗೆ ಮಹಾಯೋಗಿ ಗುರು ಗೋರಖನಾಥರಿಗೆ ಖಿಚಡಿ ಅರ್ಪಿಸಿದರು.

ಆದಿತ್ಯನಾಥ್ ಸಾರ್ವಜನಿಕ ಕಲ್ಯಾಣದ ಜೊತೆಗೆ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು, ಎಲ್ಲರಿಗೂ ಸಮೃದ್ಧ ಮತ್ತು ಸಂತೋಷದ ಜೀವನಕ್ಕಾಗಿ ಆಶೀರ್ವಾದವನ್ನು ಕೋರಿದರು.

ಗೋರಖನಾಥ ದೇವಾಲಯವು ಗುರು ಗೋರಖನಾಥರು ಸ್ಥಾಪಿಸಿದ ಪ್ರಾಚೀನ ಶೈವ ಯೋಗ ಸಂಪ್ರದಾಯವಾದ ನಾಥ ಪರಂಪರೆಯ ಮುಖ್ಯ ಸ್ಥಾನವಾಗಿದೆ. ಇದು ಸ್ವಯಂ ಶಿಸ್ತು, ಯೋಗ, ಆಂತರಿಕ ಜಾಗೃತಿ ಮತ್ತು ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ. ಸಂಪ್ರದಾಯದ ಪ್ರಕಾರ, ಗುರು ಗೋರಖನಾಥರಿಗೆ ದ್ವಿದಳ ಧಾನ್ಯಗಳು ಮತ್ತು ಅಕ್ಕಿಯನ್ನು ಅರ್ಪಿಸುವುದು ಶತಮಾನಗಳಿಂದ ಖಿಚಡಿಯಾಗಿ ವಿಕಸನಗೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರ ನಗರ ಪಾಲಿಕೆ ಮತ ಎಣಿಕೆ: ಮಹಾಯುತಿಗೆ ಆರಂಭಿಕ ಮುನ್ನಡೆ: ಮುಂಬೈನಲ್ಲಿ ಮಹಾಯುತಿ-ಠಾಕ್ರೆಗಳ ನಡುವೆ ನಿಕಟ ಸ್ಪರ್ಧೆ

ಜ. 22 ರಿಂದ ವಿಧಾನಸಭೆ ಜಂಟಿ ಅಧಿವೇಶನ: ಜಿ ರಾಮ್ ಜಿ ಕಾಯ್ದೆ ಬಗ್ಗೆ ತೀವ್ರ ಚರ್ಚೆ; CM ಬದಲಾವಣೆ ಜಟಾಪಟಿಗೆ ತಾತ್ಕಾಲಿಕ ತಡೆ!

ಎದೆಹಾಲುಣಿಸುತ್ತಿದ್ದಾಗ ಪತ್ನಿಯ ಹೊಡೆದು ಕೊಂದ ಪಾಪಿ ಪತಿ, ಉಸಿರುಗಟ್ಟಿ 6 ತಿಂಗಳ ಮಗು ಕೂಡ ಸಾವು!

ಇರಾನ್ ಸಂಘರ್ಷ: ಭಾರತೀಯರ ಕರೆತರಲು 'ಕೇಂದ್ರ' ಸಜ್ಜು, ಇಂದೇ ಮೊದಲ ವಿಮಾನದ ಹಾರಾಟ!

ಕುರ್ಚಿ ಹಗ್ಗ ಜಗ್ಗಾಟ: ದೆಹಲಿಗೆ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಜೊತೆ ಮಹತ್ವದ ಭೇಟಿ!

SCROLL FOR NEXT