ಪ್ರಶಸ್ತಿ ಸ್ವೀಕರಿಸುತ್ತಿರುವ ಯಶಸ್ವಿ 
ವಿಶೇಷ

ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ

ಪುಕ್ಕಗಳಲ್ಲಿ ಶೇ.90ರಷ್ಟು ಕೆರಾಟಿನ್ ಇರುತ್ತದೆ, ಮೀನಿನ ಮುಳ್ಳುಗಳಲ್ಲಿ ಕೊಲಾಜೆನ್, ಕ್ಯಾಲ್ಷಿಯಂ ಕಾರ್ಬೊನೇಟ್ ಇರುತ್ತದೆ. ಈ ಅಂಶಗಳು ಇರುವುದರಿಂದ ಅವನ್ನು ಹಗುರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸಬಹುದು ಎನ್ನುತ್ತಾರೆ ಯಶಸ್ವಿ. 

ವಿಜಯವಾಡ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮಾಟ್ಲಾ ಯಶಸ್ವಿ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೀಘ್ರದಲ್ಲಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಇನ್ಸ್ ಪೈರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಚಿಕನ್ ಮತ್ತು ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ವಸ್ತುಗಳನ್ನು ತಯಾರಿಸಿ ಅವರು ದೇಶದ ಗಮನ ಸೆಳೆದಿದ್ದಾರೆ. ದೇಶಾದ್ಯಂತ ಒಟ್ಟು 581 ಪ್ರಾಜೆಕ್ಟ್ ಗಳು ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಯಶಸ್ವಿ ಪ್ರಾಜೆಕ್ಟ್ ಆಯ್ಕೆಯಾಗಿದೆ. ತ್ಯಾಜ್ಯದಲ್ಲಿ ಚಿಕನ್ ಗರಿಗಳು ಮತ್ತು ಮೀನಿನ ಮುಳ್ಳುಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತದೆ. 

ಪುಕ್ಕಗಳಲ್ಲಿ ಶೇ.90ರಷ್ಟು ಕೆರಾಟಿನ್ ಇರುತ್ತದೆ, ಮೀನಿನ ಮುಳ್ಳುಗಳಲ್ಲಿ ಕೊಲಾಜೆನ್, ಕ್ಯಾಲ್ಷಿಯಂ ಕಾರ್ಬೊನೇಟ್ ಇರುತ್ತದೆ. ಈ ಅಂಶಗಳು ಇರುವುದರಿಂದ ಅವನ್ನು ಹಗುರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸಬಹುದು ಎನ್ನುತ್ತಾರೆ ಯಶಸ್ವಿ. 

ಪುಕ್ಕಗಳ ಡಿಸ್ಕ್ ತಯಾರಿಸಿ ಅದನ್ನು ಕಾರ್ಖಾನೆಗಳ ಚಿಮಣಿ ಕೊಳವೆ ಮೇಲೆ ಇರಿಸುವುದರಿಂದ ವಾಯುಮಾಲಿನ್ಯವನ್ನು ನಿಯಂತ್ರಿಸಬಹುದು. ಚಿಕನ್ ಪುಕ್ಕ, ಮೀನಿನ ಮುಳ್ಳುಗಳನ್ನು ಬಳಸಿ ಬಯೊ ಪ್ಲಾಸ್ಟಿಕ್ ತಯಾರಿಸಬಹುದು ಎನ್ನುವುದರ ಬಗ್ಗೆಗೆ ಯಶಸ್ವಿ ಪ್ರಾಜೆಕ್ಟ್ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

ಮುಸ್ಲಿಂರಿಗೆ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!

ಪುಣೆ "ರೆಡ್ ಲೈಟ್ ಏರಿಯಾ"ದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದ 11 ಬಾಂಗ್ಲಾದೇಶಿ ಮಹಿಳೆಯರ ಬಂಧನ!

Rajya Sabha polls: ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ

SCROLL FOR NEXT