ವಿಶೇಷ

ಬಂಗಾಳದ ವಲಸೆ ಕಾರ್ಮಿಕನಿಗೆ ಒಲಿದ 70 ಲಕ್ಷ ರೂ. ಕೇರಳ ಬಂಪರ್ ಲಾಟರಿ: ಪೊಲೀಸ್ ಠಾಣೆಗೆ ಓಡಿದ ವಿಜೇತ

ಬಂಗಾಳದ ಮಾಲ್ಡಾ ನಿವಾಸಿಯಾದ ಇಮಾಮ್  ತನಗೊಲಿದ ಲಾಟರಿ ಹಣದಲ್ಲಿ ಸ್ವಂತ ಮನೆ ಖರೀದಿ ಮತ್ತು ಸ್ವಂತ ಅಂಗಡಿ ತೆರಯುವುದಾಗಿ ಇಮಾಮ್ ಹೇಳಿದ್ದಾನೆ.

ಕೊಚ್ಚಿ: ಪಶ್ಚಿಮ ಬಂಗಾಳದ ಇಮಾಮ್ ಹುಸೇನ್ 5 ವರ್ಷಗಳ ಹಿಂದೆ ಕೆಲಸ ಅರಸಿ ಕುಟುಂಬ ಸಮೇತ ಕೇರಳಕ್ಕೆ ಬಂದಿದ್ದ. ಆತ ಕಳೆದ ವಾರ 5 ಕೇರಳ ರಾಜ್ಯ ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದ. 

ಇಮಾಮ್ ತನ್ನ ದಿನ ನಿತ್ಯದ ಸಂಪಾದನೆಯಲ್ಲಿ ಇಂತಿಷ್ಟು ಮೊತ್ತವನ್ನು ಲಾಟರಿ ಖರೀದಿಗೆ ಮೀಸಲಿಡುತ್ತಿದ್ದ ಮತ್ತು ಆ ಹಣದಲ್ಲಿ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದ. ಆತನ ಲಾಟರಿ ಟಿಕೆಟ್ ಕೊಳ್ಳುವ ಹವ್ಯಾಸ ಕಡೆಗೂ ಫಲ ನೀಡಿದೆ. 

ಬಂಗಾಳದ ಮಾಲ್ಡಾ ನಿವಾಸಿಯಾದ ಇಮಾಮ್ ಕೇರಳದ ಎಡತನಟ್ಟುಕ್ಕರ ಎಂಬಲ್ಲಿ ನೆಲೆಸಿದ್ದ. ಇದೀಗ ತನಗೊಲಿದ ಲಾಟರಿ ಹಣದಲ್ಲಿ ಸ್ವಂತ ಮನೆ ಖರೀದಿ ಮತ್ತು ಸ್ವಂತ ಅಂಗಡಿ ತೆರಯುವುದಾಗಿ ಇಮಾಮ್ ಹೇಳಿದ್ದಾನೆ.

ಬಹುಮಾನ ಗೆದ್ದಿರುವುದು ತಿಳಿಯುತ್ತಲೇ ಇಮಾಮ್ ಮಾಡಿದ ಮೊದಲ ಕೆಲಸ ಏನೆಂದರೆ ಪೊಲೀಸ್ ಠಾಣೆಗೆ ತೆರಳಿದ್ದು. ಅಲ್ಲಿಂದಲೇ ಬ್ಯಾಂಕ್ ಅಧಿಕಾರಿಗಳನ್ನು ಆತ ಸಂಪರ್ಕಿಸಿದ್ದ. ಬ್ಯಾಂಕ್ ಅಧಿಕಾರಿಗಳು ಮರುದಿನ ತಾವೇ ಪೊಲೀಸ್ ಠಾಣೆಗೆ ಬಂಡು ಲಾಟರಿ ಟಿಕೆಟ್ ಪಡೆದುಕೊಳ್ಳುವುದಾಗಿ ಹೇಳಿದ್ದರು. 

ಆ ದಿನ ರಾತ್ರಿ ಪೂರ್ತಿ ಇಮಾಮ್ ಪೊಲೀಸ್ ಠಾಣೆಯಲ್ಲೇ ಕಳೆದಿದ್ದ. ಬ್ಯಾಂಕ್ ಅಧಿಕಾರಿಗಳು ಬಂದ ಬಳಿಕವಷ್ಟೇ ಆತ ಠಾಣೆಯಿಂದ ಹಿಂದಿರುಗಿದ್ದು. ಲಾಟರಿ ಟಿಕೆಟ್ ಅನ್ನು ಪೊಲೀಸರ ಸಮ್ಮುಖದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. 

ಇಮಾಮ್ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಒದಗಿಸಬೇಕಿದೆ. ಆ ದಾಖಲೆಗಳು ಆತನ ಊರಿನಲ್ಲಿರುವುದರಿಂದ ದಾಖಲೆ ನೀಡಲು ಸಮಯಾವಕಾಶ ಕೇಳಿದ್ದಾನೆ. ಈ ಪ್ರಕ್ರಿಯೆ ಮುಗಿದ ಒಂದೆರಡು ತಿಂಗಳುಗಳಲ್ಲಿ 70 ಲಕ್ಷ ಬಹುಮಾನದ ಹಣ ಇಮಾಮ್ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT