ಮೂರನೇ ದಿನದಾಟದಲ್ಲಿ ಭಾರತದ ಫೀಲ್ಡಿಂಗ್ ವೇಳೆ ರವೀಂದ್ರ ಜಡೇಜಾ ಎಸೆದ 14ನೇ ಓವರ್ನಲ್ಲಿ ರಾಹುಲ್ ಕ್ಯಾಚೊಂದನ್ನು ಹಿಡಿದಿದ್ದರು. ಆದರೆ ಚೆಂಡು ನೆಲಕ್ಕೆ ತಾಗಿತ್ತು. ಈ ವಿಚಾರ ಯಾರ ಅರಿವಿಗೂ ಬಂದಿರಲಿಲ್ಲ. ತಂಡದ ಎಲ್ಲ ಆಟಗಾರರೂ ವಿಕೆಟ್ ಪಡೆದ ಸಂಭ್ರಮಾಚರಣೆಗೆ ಮುಂದಾದರು. ಆದರೆ ಚೆಂಡು ನೆಲಕ್ಕೆ ತಾಗಿತ್ತು. ಇದು ರಾಹುಲ್ ಗೆ ಮಾತ್ರ ಗೊತ್ತಿತ್ತು. ಒಂದು ಕ್ಷಣ ಪರ್ಫೆಕ್ಟ್ ಕ್ಯಾಚ್ನಂತೆ ಭಾಸವಾಗುತ್ತಿತ್ತು. ಆದರೆ ಕ್ರೀಡಾಸ್ಫೂರ್ತಿ ಮೆರೆದ ರಾಹುಲ್ ನಾಟೌಟ್ ಎಂದು ಅಂಪೈರ್ಗಳಿಗೆ ಸಂಕೇತ ಮಾಡಿದರು. ಬಳಿಕ ಫೀಲ್ಡ್ ಅಂಪೈರ್ಗಳು ಸಹ ರಾಹುಲ್ ನಡೆಗೆ ಭೇಷ್ ಹೇಳಿದರು.