ಈ ಮೂಲಕ ಮೊದಲ ಪಂದ್ಯದ ನಿಧಾನಗತಿಯ ಬ್ಯಾಟಿಂಗ್ ಗೆ ಎದುರಾಗಿದ್ದ ವ್ಯಾಪಕ ಟೀಕೆ ಎದುರಿಸಿದ್ದ ಧೋನಿ ಬ್ಯಾಟ್ ನಿಂದಲೇ ಉತ್ತರ ನೀಡಿದರು. ಆದರೆ ಕ್ರಿಕೆಟ್ ಪಂಡಿತರ ವಿಶ್ಲೇಷಣೆಯ ಅನ್ವಯ ಮೊದಲ ಪಂದ್ಯದಲ್ಲಿ ಭಾರತ ತಂಡ ಕೇವಲ 4 ರನ್ ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು, ಈ ಹೊತ್ತಿನಲ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಆಟಗಾರನ ಅವಶ್ಯಕತೆ ಇತ್ತು. ಈ ಜವಾಬ್ದಾರಿಯನ್ನು ಧೋನಿ ಹೊತ್ತಿದ್ದರು. ಆದರೆ ಅವರ ಈ ಆಟವೇ ಟೀಕಾಕಾರರಿಗೆ ಆಹಾರವಾಗಿತ್ತು, ಬಹುಶಃ ಅಂದು ಧೋನಿ ಸ್ಥಾನದಲ್ಲಿ ಭಾರತ ತಂಡದ ಸವ್ಯಸಾಚಿ ಆಟಗಾರ ರಾಹುಲ್ ದ್ರಾವಿಡ್ ಇದ್ದಿದ್ದರೆ ಇಂತಹ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲವೇನೋ.. ಆದರೆ ಧೋನಿ ಎಂಬ ಕಾರಣಕ್ಕೆ ಟೀಕೆಗಳ ಸುರಿಮಳೆಯಾಗಿದೆ. ಆದರೆ ಅಂದು ಧೋನಿ ತಂಡದ ಮಧ್ಯಮ ಕ್ರಮಾಂಕದ ಕುಸಿತ ತಡೆಯುವ ಜವಾಬ್ದಾರಿಯನ್ನು ಹೊತ್ತಿದ್ದರು. ಇದೇ ಕಾರಣಕ್ಕೆ ತಮ್ಮದಲ್ಲದ ರೀತಿಯ ಆಟದ ಮೊರೆ ಹೋಗಿ ಆಕ್ರೋಶ ಮತ್ತು ಟೀಕೆಗಳಿಗೆ ತುತ್ತಾಗಿದ್ದಾರೆ.