ಸಕತ್ ಚಿತ್ರೀಕರಣ ವೇಳೆ ನಿರ್ದೇಶಕ ಸುನಿ ಮತ್ತು ನಟ ಗಣೇಶ್ 
ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಸಕತ್ ಗೂ ಅಂಧಾಧುನ್ ಗೂ ಸಂಬಂಧವಿಲ್ಲ: ನಿರ್ದೇಶಕ ಸುನಿ

ನ್ಯಾಯಾಲಯದ ಯಾವುದೇ ವಿಚಾರಣೆಯಲ್ಲಿ ಐವಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಒಬ್ಬ ಕಣ್ಣು ಕಾಣದ ಕುರುಡ ಐವಿಟ್ನೆಸ್ ಆದರೆ ಏನಾಗುತ್ತದೆ ಎನ್ನುವುದೇ 'ಸಕತ್' ಸ್ಕ್ರಿಪ್ಟ್ ಗೆ ಮೂಲ ಪ್ರೇರಣೆ. 'ಸಕತ್' ನವೆಂಬರ್ 26ರಂದು ತೆರೆಕಾಣುತ್ತಿದೆ. 

ಬೆಂಗಳೂರು: ನವಿರಾದ ಪ್ರೀತಿ, ತಮಾಷೆಭರಿತ ಸಿನಿಮಾಗಳಿಗೆ ಹೆಸರಾದ ಕನ್ನಡ ಚಿತ್ರ ನಿರ್ದೇಶಕ ಸುನಿ ಫ್ರೆಶ್ ಮತ್ತು ಪ್ರಯೋಗಾತ್ಮಕ ಸಿನಿಮಾಗಳಿಗೆ ತೆರೆದುಕೊಂಡವರು. ಅವರು ನಿರ್ದೇಶಿಸಿರುವ ಹೊಸ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಕತ್' ನವೆಂಬರ್ 26ರಂದು ತೆರೆಕಾಣುತ್ತಿದೆ. 

ಕಾಮಿಡಿ- ಕೋರ್ಟ್ ರೂಮ್ ಡ್ರಾಮ ಸಿನಿಮಾ ಆಗಿರುವ ಸಕತ್ ಸಿನಿಮಾ ಯಾವುದೇ ರೀತಿಯಲ್ಲೂ ಬಾಲಿವುಡ್ ನ ಅಂಧಾಧುನ್ ಸಿನಿಮಾಗೆ ಹೋಲುವುದಿಲ್ಲ ಎಂದು ಸುನಿ ಸ್ಪಷ್ಟ ಪಡಿಸಿದ್ದಾರೆ. 

ನ್ಯಾಯಾಲಯದ ಯಾವುದೇ ವಿಚಾರಣೆಯಲ್ಲಿ ಐವಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಒಬ್ಬ ಕಣ್ಣು ಕಾಣದ ಕುರುಡ ಐವಿಟ್ನೆಸ್ ಆದರೆ ಏನಾಗುತ್ತದೆ ಎನ್ನುವುದೇ ನನ್ನ ಸ್ಕ್ರಿಪ್ಟ್ ಗೆ ಮೂಲ ಪ್ರೇರಣೆ.

ಹಾಲಿವುಡ್ ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಅಂಧಾಧುನ್ ಸಿನಿಮಾವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿ ಆಯುಷ್ಮಾನ್ ಖುರಾನ, ತಬು ಮತ್ತು ರಾಧಿಕಾ ಆಪ್ಟೆ ನಟಿಸಿದ್ದರು. ಅದರಲ್ಲಿ ಆಯುಷ್ಮಾನ್ ಕುರುಡನ ಪಾತ್ರದಲ್ಲಿ ಮಿಂಚಿದ್ದರು.

ಸಕತ್ ಸಿನಿಮಾದಲ್ಲಿ ಗಣೇಶ್ ಅವರ ಲುಕ್ ಅಂಧಾಧುನ್ ಸಿನಿಮಾದ ನಾಯಕನ ಪಾತ್ರವನ್ನು ಹೋಲುತ್ತಿದ್ದುದರಿಂದ ಇದು ಅಂಧಾಧುನ್ ಸಿನಿಮಾದಿಮ್ದ ಪ್ರೇರಣೆ ಪಡೆದುಕೊಂಡಿರಬಹುದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. 

ಆದರೆ ಸಕತ್ ಸಿನಿಮಾ ನೂರಕ್ಕೆ ನೂರು ಪ್ರತಿಶತ ಅಂಧಾಧುನ್ ಗಿಂತ ಭಿನ್ನವಾಗಿದೆ ಎಂದು ಸುನಿ ಗ್ರಾರಂಟಿ ಕೊಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?