ಬೆಂಗಳೂರು: ಶ್ರೀಮುರಳಿ ನಾಯಕ ನಟರಾಗಿ ಅಭಿನಯಿಸಿರುವ ಮದಗಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಆಶಿಕಾ ರಂಗನಾಥ್ ತಮ್ಮ ಪಾತ್ರದ ಕುರಿತು ಹಂಚಿಕೊಂದಿದ್ದಾರೆ. 'ಮದಗಜ' ಸಿನಿಮಾ ಡಿಸೆಂಬರ್ 3ರಂದು ತೆರೆಕಾಣುತ್ತಿದೆ.
ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಶಿಕಾ, ಆ ಪಾತ್ರದಿಂದಾಗಿ ತಮಗೆ ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭದ ಕೆಲಸ ಅಲ್ಲ ಎಂಬುದು ಅರ್ಥವಾಯಿತು ಎಂದಿದ್ದಾರೆ.
ಇಂದಿನ ಯುವಪೀಳಿಗೆಗೆ ಸಿನಿಮಾ ಒಳ್ಳೆಯ ಸಂದೇಶ ನೀಡುವುದಾಗಿ ಅವರು ಹೇಳಿದ್ದಾರೆ. ಮಹೇಶ್ ಕುಮಾರ್ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಉಮಾಪತಿ ಅವರು ಹಣ ಹೂಡಿದ್ದಾರೆ.
ಮದಗಜ ಸಿನಿಮಾದಲ್ಲಿ ಆಶಿಕಾ ಅವರು ಇದೇ ಮೊದಲ ಬಾರಿಗೆ ಮುರಳಿ ಅವರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ತುಕ್ಕು ಹಿಡಿದ ಹಳೆಯ ಸೈಕಲ್ ಓಡಿಸಿದ್ದಾರೆ, ಟ್ರ್ಯಾಕ್ಟರ್ ಓಡಿಸುವುದನ್ನೂ ಕಲಿತಿದ್ದಾರೆ. ಕೊಡಲಿ ಹಿಡಿಯಲು ಕಲಿತಿದ್ದಾರೆ, ಕೆಸರು ಮಣ್ಣಿನೊಳಗೆ ಕೆಲಸ ಮಾಡುವುದನ್ನು ಕಲಿತಿದ್ದಾರೆ, ಬೀಜ ಬಿತ್ತನೆ ಮಾಡುವುದು ಸೇರಿದಂತೆ ಗದ್ದೆ ಉಳುವುದನ್ನೂ ಕಲಿತಿದ್ದಾರೆ.
ಡೈವರ್ಸ್ ಬಳಿಕ ಚಿತ್ರರಂಗದತ್ತ ಮುಖಮಾಡಿದ ನಟಿ: ಪುಷ್ಪ ಸಿನಿಮಾದ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ ಸಮಂತಾ
'ಜಮಾಲಿಗುಡ್ಡ' ಕ್ಕೆ ಬರ್ತಿದ್ದಾರೆ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ!
ರಮೇಶ್ ಅರವಿಂದ್ ನಿರ್ದೇಶನದ '100' ಸಿನಿಮಾ ಮೆಚ್ಚಿ ಹೊಗಳಿದ ಸುಧಾ ಮೂರ್ತಿ!
'ಸಂಗೀತ ಕಲಹವನ್ನು ತಪ್ಪಿಸುತ್ತದೆ, ಶೀಘ್ರವೇ ಸರಿಗಮಪ ತಂಡವನ್ನು ಸೇರಿಕೊಳ್ಳುತ್ತೇನೆ': ಡಾ. ಹಂಸಲೇಖ