ಮಾನ್ಯತಾ ಟೆಕ್ ಪಾರ್ಕ್ ಒಳಗಡೆ ಸಂಚಾರ ದಟ್ಟಣೆ 
ರಾಜ್ಯ

ಬೆಂಗಳೂರು: ಧ್ವಂಸಗೊಳಿಸಿದ್ದ ಮೆಟ್ಟಿಲೇಣಿ ಪುನರ್ ನಿರ್ಮಾಣಕ್ಕೆ ಬಿಬಿಎಂಪಿಗೆ ಪ್ಲ್ಯಾನ್ ನೀಡಲಿರುವ ಮಾನ್ಯತಾ ಟೆಕ್ ಪಾರ್ಕ್

ಮಾನ್ಯತಾ ಟೆಕ್ ಪಾರ್ಕ್ ನವರು ಫ್ಲೈ ಓವರಿನಿಂದ ಟೆಕ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸ್ಕೈ ವಾಕ್ ಅನ್ನು ನಿರ್ಮಿಸಿದ್ದರು. ಈ ಸಂದರ್ಭ ಎರಡು ಮೆಟ್ಟಿಲೇಣಿಗಳನ್ನು ತೆಗೆಯಲಾಗಿತ್ತು.

ಬೆಂಗಳೂರು: ನಾಲ್ಕು ತಿಂಗಳ ಸತತ ಮನವಿ ನಂತರ ನಾಗವಾರ ಮತ್ತು ವೀರನಪಾಳ್ಯ ನಿವಾಸಿಗಳ  ದೂರುಗಳಿಗೆ ಸ್ಪಂದನೆ ದೊರೆತಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ನಿರ್ಮಾಣ ಕಾಮಗಾರಿ ವೇಳೆ ನೆಲಸಮಗೊಳಿಸಿದ್ದ ಎರಡು ಮೆಟ್ಟಿಲೇಣಿಗಳ ಪುನರ್ ನಿರ್ಮಾಣಕ್ಕೆ ಪ್ಲ್ಯಾನ್ ಅನ್ನು ನೀಡಲು ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗ ಕೇಳಿದೆ.

ಸ್ಥಳೀಯರು ಹೇಳುವಂತೆೀ ಹಿಂದೆ ನಾಗವಾರ ಫ್ಲೈ ಓವರ್ ಮತ್ತು ಸರ್ವೀಸ್ ರಸ್ತೆಗಳನ್ನು ಸಂಪರ್ಕಿಸಲು ಎರಡು ಮೆಟ್ಟಿಲೇಣಿಗಳಿದ್ದವು. ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಅಲ್ಲಿನ ನಿವಾಸಿಗಳು ಈ ಮೆಟ್ಟಿಲೇಣಿಗಳ ಬಳಕೆ ಮಾಡುತ್ತಿದ್ದರು. 

ಮಾನ್ಯತಾ ಟೆಕ್ ಪಾರ್ಕ್ ನವರು ಫ್ಲೈ ಓವರಿನಿಂದ ಟೆಕ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸ್ಕೈ ವಾಕ್ ಅನ್ನು ನಿರ್ಮಿಸಿದ್ದರು. ಈ ಸಂದರ್ಭ ಎರಡು ಮೆಟ್ಟಿಲೇಣಿಗಳನ್ನು ತೆಗೆಯಲಾಗಿತ್ತು. ಅದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. 

ಈ ಹಿಂದೆ ಟೆಕ್ ಪಾರ್ಕ್ ನವರಿಗೆ ಈ ಸಂಬಂಧ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT