ಸನಾತನ ಸೆಲ್ವಂ 
ವಿಶೇಷ

ಪ್ರಾಜೆಕ್ಟ್ ದಿಯಾ: ಗುಜರಿ ಸೈಕಲ್ ಗಳನ್ನೇ ರೀಸೈಕಲ್ ಮಾಡುವ ಸನಾತನ ಸೆಲ್ವಂ

ಪೇಪರ್ ಬಾಯ್ ಗಳು, ಬಸ್ ಅಥವಾ ಅಟೋದಲ್ಲಿ ಕೆಲಸಕ್ಕೆ ಹೋಗುವಷ್ಟು ಹಣವಿಲ್ಲದೆ ಕಾಲ್ನಡಿಗೆಯಲ್ಲಿ ತೆರಳುವ ಕಾರ್ಮಿಕರು ಮತ್ತಿತರ ಅಶಕ್ತ ವರ್ಗದ ಮಂದಿಗೆ ರೀಸೈಕಲ್ ಮಾಡಲಾದ ಸೈಕಲ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ

ಹೈದರಾಬಾದ್: ಕಸ ತ್ಯಾಜ್ಯ, ಪ್ಲಾಸ್ಟಿಕ್ ಉತ್ಪನ್ನಗಳನ್ನು ರೀಸೈಕಲ್ ಮಾಡುವುದನ್ನು ಕೇಳಿರುತ್ತೀರಾ, ನೋಡಿಯೂ ಇರುತ್ತೀರಾ. ಸೈಕಲನ್ನೇ ರೀಸೈಕಲ್ ಮಾಡುವ ಹವ್ಯಾಸ ಇರುವ ವ್ಯಕ್ತಿಗಳನ್ನು ಯಾವತ್ತಾದರೂ ನೋಡಿದ್ದೀರಾ? ಮೀಟ್ ಸನಾತನ ಸೆಲ್ವನ್. ಅವರು ಹಳೆಯ ಸೈಕಲ್ ಗಳನ್ನು ರೀಸೈಕಲ್ ಮಾಡುವ ಅಭಿಯಾನವನ್ನು ಹಮ್ಮಿಕೊಂಡವರು. 

ಸನಾತನ ಸೆಲ್ವನ್ ಅವರ ಅಭಿಯಾನದ ಹೆಸರು ಪ್ರಾಜೆಕ್ಟ್ ದಿಯಾ. ಹೈದರಾಬಾದ್ ನಿವಾಸಿಯಾಗಿರುವ ಅವರು ನಗರದಾದ್ಯಂತ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ತುಕ್ಕು ಹಿಡಿದ ಸೈಕಲ್ಗಳು, ಬಳಕೆಯಾಗದೆ ಎಸೆಯಲ್ಪಟ್ಟ ಸೈಕಲ್ ಗಳನ್ನು ಆರಿಸಿ ತಂದು ಅದಕ್ಕೆ ಮರು ಜೀವ ಕೊಡುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ.

ಸೆಲ್ವನ್ ಅವರ ಜೊತೆಯಲ್ಲಿ ಸೈಕಲ್ ಪಟುಗಳು ಹಾಗೂ ತಾಂತ್ರಿಕ ನೈಪುಣ್ಯ ಇರುವ 8 ಮಂದಿಯ ಸ್ವಯಂಸೇವಕರ ತಂಡವಿದೆ. ಅವರಿಂದ ಮರುಹುಟ್ಟು ಪಡೆದ ಸೈಕಲ್ ಗಳನ್ನು ಅಗತ್ಯ ಇರುವವರಿಗೆ ಉಚಿತವಾಗಿ ನೀಡಲಾಗುತ್ತದೆ. 

ಪೇಪರ್ ಬಾಯ್ ಗಳು, ಬಸ್ ಅಥವಾ ಅಟೋದಲ್ಲಿ ಕೆಲಸಕ್ಕೆ ಹೋಗುವಷ್ಟು ಹಣವಿಲ್ಲದೆ ಕಾಲ್ನಡಿಗೆಯಲ್ಲಿ ತೆರಳುವ ಕಾರ್ಮಿಕರು ಮತ್ತಿತರ ಅಶಕ್ತ ವರ್ಗದ ಮಂದಿಗೆ ಉಚಿತವಾಗಿ ಈ ಸೈಕಲ್ ಗಳನ್ನು ನೀಡಲಾಗುತ್ತಿದೆ ಎನ್ನುವುದು ಮೆಚ್ಚತಕ್ಕ ವಿಷಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT