ಗೋಡೆ ಮೇಲೆ ಪಾಠ ಮಾಡುತ್ತಿರುವ ಸಪನ್ ಕುಮಾರ್ 
ವಿಶೇಷ

ಇಡೀ ಗ್ರಾಮವೇ ಎನ್ನ ಪಾಠಶಾಲೆ, ಮನೆ ಗೋಡೆಗಳೇ ಕಪ್ಪು ಹಲಗೆ ಎಂದ ಶಿಕ್ಷಕನಿಗೆ ನವದೆಹಲಿ ಬುಲಾವ್

ಪಾಠ ಮಾಡಲು ವಿನೂತನ ದಾರಿ ಕೊಂಡುಕೊಂಡ ಜಾರ್ಖಂಡ್ ನ ಶಿಕ್ಷಕ ಸಪನ್ ಕುಮಾರ್ ರನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ನವದೆಹಲಿಗೆ ಆಹ್ವಾನಿಸಿದ್ದಾರೆ.

ರಾಂಚಿ: ಪಾಠ ಮಾಡಲು ವಿನೂತನ ದಾರಿ ಕೊಂಡುಕೊಂಡ ಜಾರ್ಖಂಡ್ ನ ಶಿಕ್ಷಕ ಸಪನ್ ಕುಮಾರ್ ರನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ನವದೆಹಲಿಗೆ ಆಹ್ವಾನಿಸಿದ್ದಾರೆ. ಅಲ್ಲಿ ಅವರು ತಮ್ಮ ವಿನೂತನ ಮಾರ್ಗದ ಕುರಿತು ಪ್ರವಚನ ನೀಡಲಿದ್ದಾರೆ. 

ದುಮರ್ತುರ್ ಗ್ರಾಮದಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಪನ್ ಕುಮಾರ್ ನರೇಂದ್ರ ಮೋದಿಯವರ ಮನ್ ಕಿ ಬಾತ್ ನಿಂದಾಗಿ ಇತ್ತೀಚಿಗೆ ಸುದ್ದಿಯಾಗಿದ್ದರು. ಗ್ರಾಮದ ಮನೆಗಳ ಗೋಡೆಗಳ ಮೇಲೆ ಅವರು ಅಕ್ಷರ ಮಾಲೆ, ಪಾಠ ಪ್ರವಚನಗಳನ್ನು ಬರೆದು ಗ್ರಾಮದ ಮನೆಗಳನ್ನು ಹಲಗೆಯನ್ನಾಗಿ ಮಾರ್ಪಡಿಸಿದ್ದರು.

ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದೆಲ್ಲೆಡೆ ಮಕ್ಕಳು ಮೊಬೈಲು ಫೋನುಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ, ಆದರೆ ಸಪನ್ ಕುಮಾರ್ ಗ್ರಾಮದಲ್ಲಿ ಬಹುತೇಕರ ಬಳಿ ಮೊಬೈಲ್ ಫೋನುಗಳು ಇಲ್ಲದ ಕಾರಣ ಸಪನ್ ಕುಮಾರ್ ಈ ವಿನೂತನ ಮಾರ್ಗ ಅನುಸರಿಸಿದ್ದರು. ಪಾಠ ಮಾಡಲು ಅವರು ಧ್ವನಿವರ್ಧಕಗಳನ್ನೂ ಬಳಕೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ: ICT ತೀರ್ಪು

Delhi Blast: 'ವೈಟ್ ಕಾಲರ್' ಉಗ್ರ ಜಾಲ: ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ವಿಚಾರಣೆ, ಯಾರು ಈಕೆ?

ಮಹಾಯುತಿಯಲ್ಲಿ ಬಿರುಕು: ಶರದ್ ಪವಾರ್ ಎನ್‌ಸಿಪಿ ಜತೆ ಶಿಂಧೆ ಶಿವಸೇನೆ ಮೈತ್ರಿ!

ಶೂನ್ಯ ರೇಬಿಸ್ ಸಾವುಗಳ ಬಗ್ಗೆ ಕೇಂದ್ರದಿಂದ ಸುಳ್ಳು ಮಾಹಿತಿ?!: RTI ಹೇಳ್ತಿರೋದೇ ಬೇರೆ ಕತೆ!

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

SCROLL FOR NEXT