ಸಾಂದರ್ಭಿಕ ಚಿತ್ರ 
ದೇಶ

ಒಡಿಶಾ: ಆಕಾಶದಿಂದ ಧರೆಗಿಳಿದು ಬಂದ ತರಕಾರಿಗಳ ಬೆಲೆ: ಜನಸಾಮಾನ್ಯರು ನಿರಾಳ

ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ.

ಭುವನೇಶ್ವರ: ಬಹುತೇಕ ತರಕಾರಿಗಳ ಬೆಲೆ ಕೆಲವು ತಿಂಗಳುಗಳಿಂದ ದೇಶದೆಲ್ಲೆಡೆ ಗಗನಕ್ಕೇರಿತ್ತು. ಈ ನಡುವೆ ಒಡಿಶಾ ರಾಜ್ಯದಲ್ಲಿ ದುಬಾರಿ ದರದಲ್ಲಿ ಮಾರಾಟಗೊಳ್ಳುತ್ತಿದ್ದ ತರಕಾರಿಗಳ ಬೆಲೆ ಕುಸಿದಿದೆ.

ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ. ತರಕಾರಿಗಳ ಬೆಲೆ ಅರ್ಧಕ್ಕರ್ಧ ಕಡಿತಗೊಂಡಿರುವುದಾಗಿ ತಿಳಿದುಬಂದಿದೆ. 

ಕಾಲಿಫ್ಲವರ್ ಈ ಹಿಂದೆ ಪ್ರತಿ ಕೆ.ಜಿ 40 ರೂ.ಗಳಿಗೆ ಮಾರಾಟಗೊಳ್ಳುತ್ತಿತ್ತು. ಇದೀಗ್ 20 ರೂ.ಗೆ ಮಾರಾಟವಾಗುತ್ತಿದೆ. 

ಕಿಲೊ 30 ರೂ. ಬದನೆಕಾಯಿಗೆ ಈಗ 15 ರೂ. ಅದೇ ರೀತಿ ಟೊಮೆಟೊ, ಕುಂಬಳಕಾಯಿ ಬೆಲೆಗಳೂ ಅರ್ಧಕ್ಕರ್ಧ ಕಡಿತಗೊಂಡಿವೆ. ಇದರಿಂದಾಗಿ ಜನಸಾಮಾನ್ಯರು ನಿಟ್ಟುಸಿರುಬಿಡುವಂತಾಗಿದ್ದು ರಾಜ್ಯದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT