ಪಿ.ಎಂ. ಸುರೇಶ್ 
ವಿಶೇಷ

ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವ

ಅಂಗ ದಾನ ಯೋಜನೆ 'ಮೃತ ಸಂಜೀವನಿ' ಅಡಿ ಸುರೇಶ್ ಅವರ ಕಣ್ಣುಗಳು, ಕಿಡ್ನಿ, ಯಕೃತ್ತು ಭಾಗಗಳನ್ನು ಅಗತ್ಯ ಇರುವ ರೋಗಿಗಳಿಗೆ ನೀಡಿ ಅವರಿಗೆ ಮರುಜನ್ಮ ನೀಡಲಾಗಿದೆ. 

ಕೊಚ್ಚಿ: ಅಪಘಾತಕ್ಕೀಡಾಗಿದ್ದ ಇಡುಕ್ಕಿ ನಗರದ 46 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ತರುವಾಗಲೇ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ಹೇಳಿದ್ದರು. ಭಾರ ಹೊರುವ ಕೂಲಿ ಕೆಲಸ ಮಾಡಿಕೊಂಡಿದ್ದ ಪಿ.ಎಂ. ಸುರೇಶ್ ಆ ದುರ್ದೈವಿ. 

ವೈದ್ಯರ ಯಾವುದೇ ಚಿಕಿತ್ಸೆಗೂ ಸುರೇಶ್ ಸ್ಪಂದಿಸುತ್ತಿರಲಿಲ್ಲ. ಅವರನು ಉಳಿಸಿಕೊಳ್ಳುವುದು ಅಸಾಧ್ಯ ಎನ್ನುವುದನ್ನು ಅರಿತ ಸುರೇಶ್ ಕುಟುಂಬ ವರ್ಗ ಆ ಕಠಿಣ ಸಮಯದಲ್ಲೂ ಧೃತಿಗೆಡದೆ ಸುರೇಶ್ ಅಂಗಗಳನ್ನು ದಾನ ಮಾಡಲು ಮುಂದಾದರು.

ಅಂಗ ದಾನ ಯೋಜನೆ 'ಮೃತ ಸಂಜೀವನಿ' ಅಡಿ ಸುರೇಶ್ ಅವರ ಕಣ್ಣುಗಳು, ಕಿಡ್ನಿ, ಯಕೃತ್ತು ಭಾಗಗಳನ್ನು ಅಗತ್ಯ ಇರುವ ರೋಗಿಗಳಿಗೆ ನೀಡಿ ಅವರಿಗೆ ಮರುಜನ್ಮ ನೀಡಲಾಗಿದೆ. 

ಸುರೇಶ್ ಕುಟುಂಬದ ಕಾರ್ಯವನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶ್ಲಾಘಿಸಿದ್ದಾರೆ. ಸುರೇಶ್ ಅವರ ಅಂಗಗಳನ್ನು ಕಸಿ ಮಾಡಲ್ಪಟ್ಟ ರೋಗಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬ ಸದಸ್ಯನ ಅಗಲಿಕೆ ದುಃಖವನ್ನು ಭರಿಸುವ ಸಮಯದಲ್ಲಿ ಬೇರೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಸುರೇಶ್ ಕುಟುಂಬಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!