ಸಾಂದರ್ಭಿಕ ಚಿತ್ರ 
ವಿಶೇಷ

ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ

ಕಲ್ಲಿದ್ದಲನ್ನು ಆಭರಣವಾಗಿ ಧರಿಸುವ ಯೋಚನೆ ನಮ್ಮಲ್ಲನೇಕರಿಗೆ ಹುಚ್ಚುತನದ ಪರಮಾವಧಿ ಎನ್ನಿಸಬಹುದು. ಅದರೆ, ಅದನ್ನು ಸಂಶೋಧಕರು ಸಾಧ್ಯವಾಗಿಸಿದ್ದಾರೆ. 

ರಾಂಚಿ: ಕಲ್ಲಿದ್ದಲನ್ನು ಆಭರಣವಾಗಿ ಧರಿಸುವ ಯೋಚನೆ ನಮ್ಮಲ್ಲನೇಕರಿಗೆ ಹುಚ್ಚುತನದ ಪರಮಾವಧಿ ಎನ್ನಿಸಬಹುದು. ಅದು ಸಹಜವೂ ಕೂಡಾ. ಕಲ್ಲಿದ್ದಲು, ಇಂಧನ ಕ್ಷೇತ್ರದಲ್ಲಿ ಅಗತ್ಯ ಖನಿಜ ಎಂದು ಹೆಸರು ಮಾಡಿದೆ. 

ಆದರೆ. ಕಲ್ಲಿದ್ದಲು ತನ್ನ ರೂಪ ಮತ್ತು ಬಣ್ಣದ ಕಾರಣದಿಂದ ಆಕರ್ಷಕವಾಗಿಲ್ಲದೇ ಇರುವುದರಿಂದ ಅದನ್ನು ಆಭರಣವನ್ನಾಗಿ ಉಪಯೋಗಿಸಲು ಆಗುವುದಿಲ್ಲ. ಆದರೆ ಈ ಅಭಿಪ್ರಾಯವನ್ನು ಹೋಗಲಾಡಿಸಿದರೆ? ಅದರ ರೂಪ ಬದಲಾವಣೆ ಮಾಡಿ ಆಕರ್ಷಕವಾಗಿ ರೂಪುಗೊಳಿಸಿದರೆ? ಅದನ್ನು ಸಂಶೋಧಕರು ಸಾಧ್ಯವಾಗಿಸಿದ್ದಾರೆ. 

ಜಾರ್ಖಡ್ ನ ಧನ್ಬಾದ್ ನಲ್ಲಿನ ಕೇಂದ್ರೀಯ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ಸಂಸ್ಥೆಯಲ್ಲಿನ ಸಂಶೋಧಕರು ಕಲ್ಲಿದ್ದಲಿನಿಂದ ಆಭರಣಗಳನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. 

ಕಲ್ಲಿದ್ದಲಿನಿಂದ ತಯಾರಾಗುವ ಅಲಂಕಾರಿಕ ಸಾಮಗ್ರಿ ಹಗುರ ಮಾತ್ರವಲ್ಲದೆ ದೀರ್ಘ ಬಾಳಿಕೆಯನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಲ್ಲಿದ್ದಲ ತ್ಯಾಜ್ಯದಿಂದ ಆಭರಣಗಳನ್ನು ಸಂಶೋಧಕರು ರೂಪಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT