ಬಯಲಲ್ಲಿ ಆಟವಾದುತ್ತಿರುವ ವಿದ್ಯಾರ್ಥಿನಿಯರು 
ವಿಶೇಷ

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗ

ಇದಲ್ಲದೆ ಸಾಂಪ್ರದಾಯಿಕ ಆಟಗಳನ್ನು ಆಡುವುದರಿಂದ ಗಣಿತ ಲೆಕ್ಕ ಬಿಡಿಸುವುದು ಕೂಡಾ ಸುಲಭವಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾಂಪ್ರದಾಯಿಕ ಆಟಗಳ ಮಹತ್ವವನ್ನು ಅರಿತಿದ್ದಾರೆ.

ಚೆನ್ನೈ:  ತಮಿಳುನಾಡಿನ ಒತಾಕಡೈ ಎಂಬಲ್ಲಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ ಹೋಗಿದ್ದಾರೆ ಎಲ್ಲಿನ ಶಿಕ್ಷಕರು. ಈ ಪ್ರಯೋಗಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. 

ಈ ಪ್ರಯೋಗಕ್ಕೆ ಸರ್ಕಾರಿ ಅನುದಾನವಿಲ್ಲ, ಮುಖ್ಯೋಪಾಧ್ಯಯರು ತಮ್ಮ ಹಣದಿಂದಲೇ ಈ ಯೋಜನೆ ಸಾಕಾರಗೊಳಿಸಿದ್ದಾರೆ ಎನ್ನುವುದು ವಿಶೇಷ. ಮಕ್ಕಳಿಗೆ ಆಮಿಷ ಒಡ್ಡಲು ಸಾಂಪ್ರದಾಯಿಕ ಆಟಗಳನ್ನೇ ಏಕೆ ಬಳಸಿಕೊಂಡಿರಿ ಎಂಬ ಪ್ರಶ್ನೆಗೆ ಮುಖ್ಯೋಪಾಧ್ಯಾಯಿನಿ ಸಸಿತ್ರಾ, ಮೊಬೈಲ್ ಗೇಮುಗಳಿಂದ ಮಕ್ಕಳ ಮನಸ್ಸನ್ನು ಹೊರಗೆ ತರುವ ಉದ್ದೇಶ ಇದರ ಹಿಂದಿತ್ತು ಎಂದು ತಿಳಿಸಿದ್ದಾರೆ.

ಶಾಲೆಯ ನೂತನ ಪ್ರಯೋಗದ ಬಗ್ಗೆ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದಾರೆ. ತೆನ್ ಮೋಳಿ ಎಂಬ ವಿದ್ಯಾರ್ಥಿನಿ 'ನಾನು ಚೆಸ್ ಪ್ಲೇಯರ್. ಈಗ ಬಯಲಲ್ಲಿ, ಮರದ ಕೆಳಗೆ ಕುಳಿತುಕೊಂಡು ಚೆಸ್ ಆಡುವ ಅನುಭವವನ್ನು ಹಿಂದೆಂದೂ ಕಂಡಿಲ್ಲ' ಎಂದು ಸಂಸಸ ವ್ಯಕ್ತಪಡಿಸುತ್ತಾಳೆ.

ಇದಲ್ಲದೆ ಸಾಂಪ್ರದಾಯಿಕ ಆಟಗಳನ್ನು ಆಡುವುದರಿಂದ ಗಣಿತ ಲೆಕ್ಕ ಬಿಡಿಸುವುದು ಕೂಡಾ ಸುಲಭವಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT