ಇರಾಕ್ ಪ್ರಧಾನಮಂತ್ರಿ ಮುಸ್ತಾಫಾ ಅಲ್ ಕದಿಮಿ 
ವಿದೇಶ

ಡ್ರೋನ್ ದಾಳಿ ಮೂಲಕ ಇರಾಕ್ ಪ್ರಧಾನಿ ಹತ್ಯೆ ಯತ್ನ: ಮೈನವಿರೇಳಿಸುವ ರೀತಿಯಲ್ಲಿ ಪಾರು

ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.

ಬಾಗ್ದಾದ್: ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಅವರ ಹತ್ಯೆ ಸಂಚು ವಿಫಲಗೊಂಡು ಪ್ರಧಾನಿ ಸ್ವಲ್ಪದರಲ್ಲೇ ಪಾರಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ನೆಲೆಗೊಂಡ ಪ್ರಧಾನಿ ನಿವಾಸ ಬಳಿಯೇ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.

ಶಸ್ತ್ರಸಜ್ಜಿತ ಡ್ರೋನ್ ಮೂಲಕ ಪ್ರಧಾನಿ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪ್ರಧಾನಿಯ ಅಂಗರಕ್ಷಕರು ಸೇರಿದಂತೆ ಒಟ್ಟು 7 ಮಂದಿ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ದಾಳಿ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಟ್ವೀಟ್ ಮಾಡಿದ್ದು, ದೇವರ ದಯದಿಂದ ತಾವು ಸುರಕ್ಷಿತವಾಗಿದ್ದು, ಜನರೊಂದಿಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

ಅಲ್ಲದೆ ದಾಳಿ ಘಟನೆ ನಡೆದ ನಂತರ ಹಿಂದಿನ ದಿನವೇ ನಿಗದಿಯಾಗಿದ್ದ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಶಾಂತಚಿತ್ತರಾಗಿ ಕಂಡುಬಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದುವರೆಗೂ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಶಿಯಾ ಬಂಡುಕೋರ ಸಂಘಟನೆ ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷದ ವಾತಾವರಣ ದೇಶದಲ್ಲಿ ನಿರ್ಮಾಣಗೊಂಡಿತ್ತು. ಇರಾಕ್ ಸಂಸತ್ ಚುನಾವಣಾ ಫಲಿತಾಂಶವನ್ನು ಶಿಯಾ ಬಂಡುಕೋರ ಪರ ಸಂಘಟನೆಗಳು ವಿರೋಧಿಸಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT