ರಾಮ್ಲಾ 
ವಿಶೇಷ

12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿ

26ನೇ ವಯಸ್ಸಿನಲ್ಲಿ  ಅಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿ, ಮುಂದೆ ಮಾಸ್ಟರ್ಸ್ ಪದವಿಯನ್ನೂ ಪಡೆಯುತ್ತಾರೆ ರಾಮ್ಲಾ. ತಮ್ಮ ಇಂದಿನ ಸಾಧನೆಗೆ ಪತಿ ನೀಡಿದ ಸಹಕಾರವೇ ಕಾರಣ ಎಂದು ಅವರು ತಮ್ಮ ಸಾಧನೆಯ ಶ್ರೇಯವನ್ನು ಪತಿಗೆ ನೀಡುತ್ತಾರೆ.

ಕೊಚ್ಚಿ: 6ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಕೇರಳದ ಮಹಿಳೆ ರಾಮ್ಲಾ ಅಷ್ಟೂ ವರ್ಷ ತರಗತಿಗೆ ಮೊದಲಿಗರಾಗಿದ್ದರು. ನಂತರ ಓದು ಮುಂದುವರಿಸಲಾಗಲಿಲ್ಲ. ಅದಕ್ಕೆ ಕಾರಣ, ಮದುವೆ. 12ನೇ ವಯಸ್ಸಿಗೇ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. 

ಮದುವೆ ನಂತರ ಶಿಕ್ಷಣ ಮುಂದುವರಿದಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರ 4 ಮಕ್ಕಳ ತಾಯಿಯಾದ ನಂತರ ಮನೆಯ ಉಸ್ತುವಾರಿ ಮತ್ತು ಮಕ್ಕಳ ಲಾಲನೆಪಾಲನೆಯಲ್ಲಿಯೇ ಅವರ ಜೀವನ ಕಳೆದುಹೋಯಿತು. 

ಅಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿದ್ದು 26ನೇ ವಯಸ್ಸಿನಲ್ಲಿ ಎನ್ನುವುದು ಅಚ್ಚರಿಯ ಸಂಗತಿ. ಮನೆಗೆ ಬಂದಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಯೋರ್ವರು 18 ದಾಟಿದ ಯಾರು ಬೇಕಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬಹುದು ಎನ್ನುವ ಮಾಹಿತಿ ತಿಳಿಸಿದರು. ರಾಮ್ಲಾ ಅವರ ಓದಿನ ಆಸೆ ಚಿಗುರಲು ಅ ಸಿಬ್ಬಂದಿ ಕಾರಣರಾದರು.

ಮಕ್ಕಳ ಲಾಲನೆ ಪಾಲನೆ ನಡುವೆಯೇ ಓದಿಗೆ ಸಮಯ ಮೀಸಲಿಟ್ಟರು. ಅದೀಗ ಫಲ ನೀಡಿದೆ. ಈಗ ರಾಮ್ಲಾ ಅವರಿಗೆ 45 ವರ್ಷ ವಯಸ್ಸು. ಅರೇಬಿಕ್ ಭಾಷೆಯಲ್ಲಿ ಅವರು ಮಾಸ್ಟರ್ಸ್ ಪದವಿ ಪಡೆದಿದ್ದಾರೆ. 

ರಾಜ್ಯ ಸರ್ಕಾರಿ ಶಿಕ್ಷಕರ ನೇಮಕಾತಿಗೆ ನಡೆಸಲಾಗುವ ಅರ್ಹತಾ ಪರೀಕ್ಷೆಯನ್ನು ರಾಮ್ಲಾ ಪಾಸು ಮಾಡಿದ್ದಾರೆ. ಇಂದು ರಾಮ್ಲಾ ಅವರು ತಮ್ಮ ಓದುವ ಕನಸನ್ನು ಮಾತ್ರವೇ ನನಸು ಮಾಡಿಕೊಂಡಿಲ್ಲ, ನಾದಪುರಂನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 

ತಮ್ಮ ಇಂದಿನ ಸಾಧನೆಗೆ ಪತಿ ನೀಡಿದ ಸಹಕಾರವೇ ಕಾರಣ ಎಂದು ಅವರು ತಮ್ಮ ಸಾಧನೆಯ ಶ್ರೇಯವನ್ನು ಪತಿಗೆ ನೀಡುತ್ತಾರೆ. ಮಾಸ್ಟರ್ಸ್ ಪದವಿ ಪಡೆಯುವವರೆಗಿನ ಸಂದರ್ಭದಲ್ಲಿ ಮಕ್ಕಳನ್ನು ಬಿಟ್ಟಿರಬೇಕಾಗಿಬರುತ್ತಿತ್ತು. ಮನೆಗೆಲಸಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿರಲಿಲ್ಲ.

ಅಲ್ಲದೆ ಹಾಸ್ಟೆಲ್ಲಿನಲ್ಲಿ ಇರಬೇಕಾದ ಪರಿಸ್ಥಿತಿಯೂ ಬಂದಿತ್ತು. ಆ ಸಂದರ್ಭದಲ್ಲಿ ಪತಿ ಧೈರ್ಯ ತುಂಬಿ ತಮ್ಮನ್ನು ಹಾಸ್ಟೆಲ್ಲಿಗೆ ಕಳಿಸಿಕೊಟ್ಟಿದ್ದರು ಎಂದು ಪತಿಯನ್ನು ತುಂಬು ಹೃದಯದಿಂದ ನೆನೆಯುತ್ತಾರೆ ರಾಮ್ಲಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT